ರಾಜಕಾರಣಿಯ ಅಂತ್ಯಕ್ರಿಯೆಯ ವೇಳೆ ನೂಕುನುಗ್ಗಲು: ಹತ್ತು ಮಂದಿ ಮೃತ್ಯು
ಚಿತ್ತಗಾಂಗ್, ಡಿ.18: ಬಾಂಗ್ಲಾದೇಶದಲ್ಲಿ ರಾಜಕಾರಣಿಯೊಬ್ಬರ ಅಂತ್ಯಕ್ರಿಯೆಯಲ್ಲಿ ಬೃಹತ್ ಜನಸ್ತೋಮ ಸೇರಿದ್ದ ಸಂದರ್ಭದಲ್ಲಿ ಉಂಟಾದ ನೂಕುನುಗ್ಗಲಿನಲ್ಲಿ ಕಾಲ್ತುಳಿತಕ್ಕೆ ಒಳಗಾಗಿ ಕನಿಷ್ಟ ಹತ್ತು ಮಂದಿ ಸಾವನ್ನಪ್ಪಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಅವಾಮಿ ಲೀಗ್ನ ಹಿರಿಯ ನಾಯಕ ಮೊಹಿಯುದ್ದೀನ್ ಚೌಧುರಿಯ ಅಂತ್ಯಕ್ರಿಯೆಯು ಬಾಂಗ್ಲಾದೇಶದ ದಕ್ಷಿಣ ಭಾಗದ ನಗರ ಚಿತ್ತಗಾಂಗ್ನಲ್ಲಿ ಸೋಮವಾರ ನಡೆದಿತ್ತು. ಈ ವೇಳೆ ಸುಮಾರು ಒಂದು ಲಕ್ಷ ಜನರು ಆಗಮಿಸಿದ್ದರು. ಈ ವೇಳೆ ನೂಕುನುಗ್ಗಲು ಉಂಟಾಗಿ ಕಾಲ್ತುಳಿತಕ್ಕೊಳಗಾಗಿ ಹತ್ತು ಜನರು ಸಾವನ್ನಪ್ಪಿದ್ದಾರೆ, ಜೊತೆಗೆ ಹಲವರು ಗಾಯಗೊಂಡಿದ್ದಾರೆ ಎಂದು ತಿಳಿಸಿರುವ ಪೊಲೀಸರು ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.
Next Story