ನೇಪಾಳ ವಿಮಾನ ಅಪಘಾತ: ಬದುಕುಳಿದವರ ಗುರುತು ಪತ್ತೆ ಇನ್ನೂ ಆಗಿಲ್ಲ
ಕಠ್ಮಂಡು, ಮಾ. 15: ನೇಪಾಳ ರಾಜಧಾನಿ ಕಠ್ಮಂಡುವಿನಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಬದುಕುಳಿದಿರುವ 22 ಮಂದಿಯ ಪೈಕಿ ಹೆಚ್ಚಿನವರನ್ನು ಗುರುತಿಸಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.
ಬದುಕುಳಿದವರಲ್ಲಿ ಹೆಚ್ಚಿನವರು ತೀವ್ರ ಸುಟ್ಟ ಗಾಯಗಳಿಗೊಳಗಾಗಿದ್ದಾರೆ. ಅವರ ಪರಿಸ್ಥಿತಿ ಗಂಭೀರವಾಗಿದ್ದು, ಅವರು ಮಾತನಾಡುವ ಸ್ಥಿತಿಯಲ್ಲಿಲ್ಲ.
ಬದುಕಿರುವವರು ಹಾಗೂ ಮೃತಪಟ್ಟವರೆಲ್ಲರೂ ತೀವ್ರ ಸುಟ್ಟ ಗಾಯಕ್ಕೊಳಗಾಗಿದ್ದು, ಅವರನ್ನು ಗುರುತಿಸಲು ತುಂಬಾ ಕಷ್ಟವಾಗಿದೆ ಎಂದು ಪೊಲೀಸ್ ವಕ್ತಾರರೊಬ್ಬರು ತಿಳಿಸಿದರು.
67 ಪ್ರಯಾಣಿಕರು ಮತ್ತು 4 ಸಿಬ್ಬಂದಿಯನ್ನು ಹೊತ್ತು ಬಾಂಗ್ಲಾದೇಶದಿಂದ ಬಂದ ಪ್ರಯಾಣಿಕ ವಿಮಾನವೊಂದು ಸೋಮವಾರ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಾಗ ರನ್ವೇ ಪಕ್ಕದ ಗದ್ದೆಗೆ ಅಪ್ಪಳಿಸಿರುವುದನ್ನು ಸ್ಮರಿಸಬಹುದಾಗಿದೆ. ದುರಂತದಲ್ಲಿ 49 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 22 ಮಂದಿ ಗಂಭೀರ ಗಾಯಗಳೊಂದಿಗೆ ಬದುಕುಳಿದಿದ್ದಾರೆ.
Next Story