ಭಾರತದ ತಾಳೆ ಎಣ್ಣೆ ಆಮದು ನಿರ್ಬಂಧದಿಂದ ಕಳವಳ: ಮಲೇಶ್ಯ
ಕೌಲಾಲಂಪುರ (ಮಲೇಶ್ಯ), ಜ. 14: ರಾಜತಾಂತ್ರಿಕ ವಿವಾದವೊಂದರ ಬಳಿಕ ಮಲೇಶ್ಯದಿಂದ ಮಾಡಿಕೊಳ್ಳುತ್ತಿದ್ದ ತಾಳೆ ಎಣ್ಣೆ ಆಮದಿನ ಮೇಲೆ ಭಾರತ ನಿರ್ಬಂಧಗಳನ್ನು ವಿಧಿಸಿರುವುದರಿಂದ ಮಲೇಶ್ಯ ಕಳವಳಗೊಂಡಿದೆ ಎಂದು ಮಲೇಶ್ಯ ಪ್ರಧಾನಿ ಮಹಾತಿರ್ ಮುಹಮ್ಮದ್ ಮಂಗಳವಾರ ಹೇಳಿದ್ದಾರೆ.
ಆದರೆ, ‘ಸರಿಯಲ್ಲದ’ ವಿಷಯಗಳ ಬಗ್ಗೆ ಮಾತನಾಡುವುದರಿಂದ ಮಲೇಶ್ಯಕ್ಕೆ ಆರ್ಥಿಕ ಹಿನ್ನಡೆ ಉಂಟಾದರೂ ಅವುಗಳ ವಿರುದ್ಧ ಮಾತನಾಡುವುದನ್ನು ನಾನು ಮುಂದುವರಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಧರ್ಮದ ಆಧಾರದಲ್ಲಿ ಪೌರತ್ವ ನೀಡುವ ಭಾರತದ ನೂತನ ಪೌರತ್ವ ತಿದ್ದುಪಡಿ ಕಾನೂನನ್ನು (ಸಿಎಎ) ಮಹಾತಿರ್ ಮುಹಮ್ಮದ್ ಟೀಕಿಸಿದ ಬಳಿಕ, ಆ ದೇಶದಿಂದ ಮಾಡುವ ತಾಳೆ ಎಣ್ಣೆ ಆಮದಿನ ಮೇಲೆ ಭಾರತ ನಿರ್ಬಂಧ ವಿಧಿಸಿದೆ.
ಭಾರತದ ನಿರ್ಬಂಧದ ಹಿನ್ನೆಲೆಯಲ್ಲಿ, ಮಲೇಶ್ಯದ ತಾಳೆ ಎಣ್ಣೆ ಸಂಸ್ಕರಣೆ ಘಟಕಗಳು ವ್ಯಾಪಾರ ಕಳೆದುಕೊಂಡಿವೆ. ಇದಕ್ಕೆ ಸರಕಾರ ಪರಿಹಾರವೊಂದನ್ನು ಕಂಡುಕೊಳ್ಳಲಿದೆ ಎಂದು ಮಹಾತಿರ್ ಹೇಳಿದ್ದಾರೆ.
Next Story