ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲಲು ತೆಂಗಿನ ಮರ ಏರಿ ಸುದ್ದಿಗೋಷ್ಟಿ ನಡೆಸಿದ ಸಚಿವ!
ಹೊಸದಿಲ್ಲಿ: ಸಚಿವರೊಬ್ಬರು ಸಮಸ್ಯೆಯೊಂದನ್ನು ವಿವರಿಸಲು ತೆಂಗಿನಮರಕ್ಕೆ ಹತ್ತಿ ಪತ್ರಿಕಾಗೋಷ್ಟಿ ನಡೆಸಿರುವ ಘಟನೆ ಶ್ರೀಲಂಕಾದಲ್ಲಿ ನಡೆದಿದೆ.
ಶ್ರೀಲಂಕಾದ ಸಚಿವ ಅರುಂಧಿಕಾ ಫೆರ್ನಾಂಡೋ ಶ್ರೀಲಂಕಾದಲ್ಲಿ ತೆಂಗಿನಕಾಯಿಗಳ ಕೊರತೆಯ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲಲು ತಮ್ಮ ಫಾರ್ಮ್ ಹೌಸ್ ನಲ್ಲಿದ್ದ ತೆಂಗಿನಮರ ಏರಿ ಸುದ್ದಿಗೋಷ್ಟಿ ನಡೆಸಿದರು.
ದೇಶದಲ್ಲಿ 700 ಮಿಲಿಯನ್ ತೆಂಗಿನ ಕಾಯಿಗಳ ಕೊರತೆ ಇದೆ ಎಂದ ಅವರು ಜನರು ತೆಂಗಿನ ಮರಗಳನ್ನು ಬೆಳೆಸಬೇಕು ಎಂದು ಕರೆ ನೀಡಿದರು.
Next Story