‘ಹಫೀಝ್ ನಮಗೆ ಯಾವ ಮೊಟ್ಟೆ ಇಡುತ್ತಾನೆ?’
ಇಸ್ಲಾಮಾಬಾದ್, ಅ. 7: ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ಗುಂಪುಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂಬ ಒತ್ತಡ ಹೆಚ್ಚಾಗಿರುವಂತೆಯೇ, ಜಮಾತ್-ಉದ್-ದವ (ಜೆಯುಡಿ) ಮುಖ್ಯಸ್ಥ ಹಫೀಝ್ ಸಯೀದ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಡಳಿತಾರೂಢ ಪಾಕಿಸ್ತಾನ್ ಮುಸ್ಲಿಮ್ ಲೀಗ್-ನವಾಝ್ (ಪಿಎಂಎಲ್-ಎನ್) ಪಕ್ಷದ ಸಂಸದರೊಬ್ಬರು ಕರೆ ನೀಡಿದ್ದಾರೆ.
ಲಷ್ಕರೆ ತಯ್ಯಬ ಭಯೋತ್ಪಾದನೆ ಸಂಘಟನೆಯ ಸ್ಥಾಪಕ ಸಯೀದ್ ವಿರುದ್ಧ ಕ್ರಮ ತೆಗೆದುಕೊಳ್ಳಲು ವಿಫಲವಾಗಿರುವ ಸರಕಾರವನ್ನು ರಾಣಾ ಮುಹಮ್ಮದ್ ಅಫ್ಝಲ್ ಗುರುವಾರ ಪ್ರಶ್ನಿಸಿದರು.
‘‘ಹಫೀಜ್ ಸಯೀದ್ನನ್ನು ನಾವು ರಕ್ಷಿಸಬೇಕಾದರೆ ಆತ ನಮಗೆ ಯಾವ ಮೊಟ್ಟೆ ಇಡುತ್ತಾನೆ’’ ಎಂದು ವಿದೇಶ ವ್ಯವಹಾರಗಳ ಕುರಿತ ಸ್ಥಾಯಿ ಸಮಿತಿ ಸಭೆಯೊಂದರಲ್ಲಿ ಮಾತನಾಡಿದ ಅಫ್ಝಲ್ ಪ್ರಶ್ನಿಸಿದರು ಎಂದು ಬಿಬಿಸಿ ಉರ್ದು ವರದಿ ಮಾಡಿದೆ.
Next Story