ಕಸ ವಿಂಗಡಿಸದ ಹೊಟೇಲ್ಗಳ ಮೇಲೆ ದಾಳಿ
50 ಲಕ್ಷ ರೂ. ದಂಡ ಬೆಂಗಳೂರು, ಜ.7: ಕಸ ವಿಂಗಡಣೆ ಮಾಡದ ಹೊಟೇಲ್ಗಳು, ಲಾಡ್ಜ್ ಹಾಗೂ ವೈನ್ಸ್ಟೋರ್ಗಳ ಮೇಲೆ ದಾಳಿ ಮಾಡಿದ ಬಿಬಿಎಂಪಿ ಘನ ತ್ಯಾಜ್ಯ ನಿರ್ವಹಣಾ ವಿಭಾಗದ ವಿಶೇಷ ಆಯುಕ್ತ ಸುಬೋಧ್ ಯಾದವ್, 2 ಲಕ್ಷದ 50ಸಾವಿರ ರೂ.ದಂಡ ವಿಧಿಸಿದ್ದಾರೆ.
ಮೂವಿಲ್ಯಾಂಡ್ ಚಿತ್ರಮಂದಿರ ಸಮೀಪದ ಸಿದ್ದಾರ್ಥ ವೈನ್ಸ್ಟೋರ್ ಮೇಲೆ ದಾಳಿ ಮಾಡಿದ ಅವರು, ಮದ್ಯದ ಬಾಟಲ್ಗಳು ಎಲ್ಲೆಂದರಲ್ಲಿ ಚೆಲ್ಲಾಡಿರುವುದನ್ನು ಕಂಡು, ವೈನ್ಸ್ಟೋರ್ ಮಾಲಕರಿಗೆ ನೋಟಿಸ್ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ದೇ ರೀತಿಯಲ್ಲಿ ಗಾಂಧಿನಗರದ ಹಲವು ಹೊಟೇಲ್ಗಳು ಮತ್ತು ಲಾಡ್ಜ್ಗಳ ಮೇಲೆ ದಿಢೀರ್ ದಾಳಿ ನಡೆಸಿ, ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡದ ಹೊಟೇಲ್ಗಳಿಗೆ ದಂಡ ವಿಧಿಸಿದರು.
Next Story