ಬ್ಯಾಂಕ್ ಗ್ರಾಹಕರಿಗೆ ತಟ್ಟಲಿದೆ ಸರಕಾರಿ ರಜೆ, ಕರ್ನಾಟಕ ಬಂದ್ ಬಿಸಿ
ಗ್ರಾಹಕರೆ ಬ್ಯಾಂಕ್ನ ವ್ಯವಹಾರ ಪೂರ್ಣಗೊಳಿಸಿಕೊಳ್ಳಿ
ಬೆಂಗಳೂರು, ಜ.23: ಮಹಾದಾಯಿ, ಕಳಸಾ ಬಂಡೂರಿ ವಿವಾದ ಇತ್ಯರ್ಥಕ್ಕೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಜ.25ಕ್ಕೆ ಕರ್ನಾಟಕ ಬಂದ್ಗೆ ಕರೆ ನೀಡಿದ್ದರೆ, ಜ.26 ಗಣರಾಜ್ಯೋತ್ಸವ, ಜ.28 ರವಿವಾರ ಆಗಿರುತ್ತದೆ. ಹೀಗಾಗಿ, ಗ್ರಾಹಕರು ಎಚ್ಚೆತ್ತುಕೊಂಡು ಜ.24 ಹಾಗೂ ಜ.27ರಂದು ಬ್ಯಾಂಕ್ನಲ್ಲಿ ತಮ್ಮ ಅಗತ್ಯ ವ್ಯವಹಾರಗಳನ್ನು ಪೂರ್ಣಗೊಳಿಸುವುದು ಒಳಿತು.
ಜ.25ರಂದು ಬ್ಯಾಂಕ್ಗಳು ರಜೆ ಇವೆಯೆಂದು ಯಾವುದೇ ಅಧಿಕೃತ ಮಾಹಿತಿ ಇಲ್ಲವಾದರೂ ಬ್ಯಾಂಕ್ಗಳು ದಿಢೀರ್ ರಜೆ ಘೋಷಣೆ ಮಾಡಿದರೆ ಗ್ರಾಹಕರಿಗೆ ಹಲವು ಸಮಸ್ಯೆಗಳು ಉದ್ಭವವಾಗುವ ಸಾಧ್ಯತೆಗಳಿವೆ. ಹೀಗಾಗಿ, ಗ್ರಾಹಕರು ಜ.24 ಹಾಗೂ ಜ.27ರಂದು ಅಗತ್ಯ ವ್ಯವಹಾರಗಳನ್ನು ಪೂರ್ಣಗೊಳಿಸುವುದು ಒಳ್ಳೆಯದು.
ಜ.26, ಜ.28ರಂದು ಸರಕಾರಿ ರಜೆಗಳಿವೆ. ಹಾಗೆಯೇ ಜ.25 ರಂದು ಒಂದು ದಿನ ರಜೆಯ ಸಾಧ್ಯತೆಯಿದೆ. ಹೀಗಾಗಿ, ಬ್ಯಾಂಕ್ನ ಗ್ರಾಹಕರು ಎಚ್ಚೆತ್ತುಕೊಳ್ಳುವುದು ಒಳಿತು.
Next Story