ಕ್ರೀಡಾ ಮನೋಭಾವದಿಂದ ಪಂದ್ಯಾಟದಲ್ಲಿ ಭಾಗವಹಿಸಿ ಭವಿಷ್ಯವನ್ನು ರೂಪಿಸಿಕೊಳ್ಳಬೇಕು: ಡಾ. ವೀರೇಂದ್ರ ಹೆಗ್ಗಡೆ
ಅಖಿಲ ಭಾರತ ಅಂತರ ವಿ.ವಿ. ಪುರುಷರ ನೆಟ್ಬಾಲ್ ಪಂದ್ಯಾಟ
ಬೆಳ್ತಂಗಡಿ, ಫೆ. 25: ಸ್ಫರ್ಧಾಳುಗಳು ಸೋಲು-ಗೆಲುವಿನ ಬಗ್ಗೆ ಚಿಂತಿಸದೆ ಕ್ರೀಡಾ ಮನೋಭಾವದಿಂದ ಪಂದ್ಯಗಳಲ್ಲಿ ಭಾಗವಹಿಸಿ, ತಮ್ಮ ಉಜ್ವಲ ಭವಿಷ್ಯ ವನ್ನು ರೂಪಿಸಿಕೊಳ್ಳಬೇಕು. ಬದ್ಧತೆ, ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಪಂದ್ಯಗಳಲ್ಲಿ ಭಾಗವಹಿಸುವುದರಿಂದ ಉತ್ತಮ ಅನುಭವ ಸಿಗುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಉಜರೆಯಲ್ಲಿ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ರವಿವಾರ ಅಖಿಲ ಭಾರತ ಅಂತರ ವಿ.ವಿ. ಪುರುಷರ ನೆಟ್ಬಾಲ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು.
ನೆಟ್ಬಾಲ್ ಕ್ರೀಡೆ ಇಂದು ದೇಶ ವಿದೇಶಗಳಲ್ಲಿ ಜನಪ್ರಿಯವಾಗುತ್ತಿದೆ. ಮಾನಸಿಕ, ದೈಹಿಕ ಕ್ಷಮತೆಯನ್ನು ಹೆಚ್ಚಿಸುವಲ್ಲ್ಲಿ ಕ್ರೀಡೆಯ ಪಾತ್ರ ಪ್ರಾಮುಖ್ಯವಾ ದುದು ಕ್ರೀಡಾಪಟುಗಳು ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯ ವೃದ್ಧಿಸಿಕೊಳ್ಳುವುದರೊಂದಿಗೆ ತಮ್ಮ ಆರೋಗ್ಯವನ್ನು ಕಾಪಾಡಬೇಕು. ಮಂಗಳೂರು ವಿ.ವಿ. ತಂಡದ ನಾಯಕ ಹಾಗೂ ಉಜಿರೆಯ ಎಸ್.ಡಿ.ಎಂ. ಕಾಲೇಜಿನ ಕ್ರೀಡಾಪಟು ನಿತಿನ್ ಪ್ರತಿಜ್ಞಾವಿಧಿ ಬೋಧಿಸಿದರು.
ಪಂದ್ಯದ ವೀಕ್ಷಕ ಕುರುಕ್ಷೇತ್ರ ವಿವಿ.ಯ ಡಾ. ರಾಜೇಶ್ ಶುಾಶಂಸನೆ ಮಾಡಿದರು. ಎಸ್ ಡಿ ಎಂ ಶಿಕ್ಚಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ಉಪಸ್ಥಿತರಿದ್ದರು. ಮಂಗಳೂರು ವಿ.ವಿ. ದೈಹಿಕ ಶಿಕ್ಷಣ ನಿರ್ದೇಶಕ ಡಾ. ಕಿಶೋರ್ ಕುಮಾರ್ ಸಿ.ಕೆ. ಸ್ವಾಗತಿಸಿದರು. ಎಸ್.ಡಿ.ಎಮ್. ಕಾಲೇಜಿನ ಪ್ರಾಂಶುಪಾಲ ಪ್ರೊ. ಟಿ.ಎನ್. ಕೇಶವ ವಂದಿಸಿದರು. ಪ್ರೊ. ಬಿ.ಎ. ಕುಮಾರ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು.
ದೇಶದ 45 ವಿ.ವಿ.ಗಳಿಂದ 450 ಕ್ರೀಡಾಪಟುಗಳು 4 ದಿನ ನಡೆಯುವ ನೆಟ್ಬಾಲ್ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದಾರೆ.
ಫಲಿತಾಂಶ
ಪುಣೆಯ ಸಾವಿತ್ರಿ ಭ್ಯಾಫುಲೆ ವಿ.ವಿ. (ಅಂಕಗಳು: 36) ರಾಷ್ಟ್ರಸಂತ ಮಹಾರಾಜ್ ವಿ.ವಿ. ನಾಗಪುರ (ಅಂಕಗಳು : 19)ವನ್ನು ಸೋಲಿಸಿದೆ.
ಪಂಡಿತ್ ರವಿಶಂಕರ್ ಶುಕ್ಲ ವಿ.ವಿ. ರಾಯ್ಪುರ (ಅಂಕಗಳು: 51) ಮಾಹಾತ್ಮಾಗಾಂಧಿ ಕಾಶಿ ವಿದ್ಯಾಪೀಠ, ವಾರಣಾಸಿ (ಅಂಕಗಳು : 18)ವನ್ನು ಸೋಲಿಸಿದೆ.
ಉತ್ಕಲ್ ವಿ.ವಿ. ಭುವನೇಶ್ವರ (ಅಂಕಗಳು: 24) ಗಿ. ದಾವಣಗೆರೆ ವಿ.ವಿ. (ಅಂಕಗಳು : 18) ವನ್ನು ಸೋಲಿಸಿದೆ.
ಹೇಮಚಂದ್ರಾಚಾರ್ಯ ಉತ್ತರ ವಿ.ವಿ. ಪಠಾಣ್ (ಅಂಕಗಳು: 32) ಕೃಷ್ಣ ವಿ.ವಿ. ಮಚಲೀಪಟ್ಟಣಮ್ (ಅಂಕಗಳು : 22)ವನ್ನು ಸೋಲಿಸಿದೆ.
ಎಮ್.ಜಿ. ವಿ.ವಿ. ಕೊಟ್ಟಾಯಂ (ಅಂಕಗಳು: 54) ಎ.ಐ,ಎಸ್,ಇ,ಸಿ,ಟಿ, ವಿ.ವಿ. ಭೋಪಾಲ್ (ಅಂಕಗಳು : 10) ವನ್ನು ಸೋಲಿಸಿದೆ.