6 ನೇ ಸೆಲ್ಕೊ ಸೂರ್ಯಮಿತ್ರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಚಿತ್ರದುರ್ಗ, ಮೇ 19: ಉಡುಪಿಯ ಕೆ.ಎಂ.ಉಡುಪ ಹಾಗೂ ಪುಣೆಯ ಡಾ.ವೀಣಾ ಜೋಷಿ ಅವರಿಗೆ 6ನೇ ಸೆಲ್ಕೊ ಸೂರ್ಯಮಿತ್ರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಶನಿವಾರ ನಗರದ ತರಾಸು ರಂಗಮಂದಿರದಲ್ಲಿ ಸೆಲ್ಕೊ ಫೌಂಡೇಶನ್ನಿಂದ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ವಿಕೇಂದ್ರೀಕೃತ ಸೌರ ಉಪಕರಣಗಳಿಗೆ ಬ್ಯಾಂಕ್ಗಳಲ್ಲಿ ಸಾಲ ಸೌಲಭ್ಯ ಒದಗಿಸುವ ನೀತಿಗೆ ಪ್ರವರ್ತಕರಾಗಿರುವ ಉಡುಪ ಅವರನ್ನು ಹಾಗೂ ಸುಸ್ಥಿರ ಇಂಧನ ಕ್ಷೇತ್ರದಲ್ಲಿ ನೀಡುವ ಕೊಡುಗೆಗಾಗಿ ವೀಣಾ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
Next Story