ಕುಮಾರಸ್ವಾಮಿ ಅವಧಿ ಪೂರ್ಣಗೊಳಿಸಲು ಕಾಂಗ್ರೆಸ್ ಬಿಡುವುದಿಲ್ಲ: ನಟ ಜಗ್ಗೇಶ್
ಬೆಂಗಳೂರು, ಮೇ 22: ನಿಯೋಜಿತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಐದು ವರ್ಷ ಅವಧಿ ಪೂರ್ಣಗೊಳಿಸಲು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಡುವುದಿಲ್ಲ ಎಂದು ಬಿಜೆಪಿಯ ಪರಾಜಿತ ಅಭ್ಯರ್ಥಿ ಹಾಗೂಸಿದ್ದಾರೆ.
ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎಲ್ಲರೂ, ಅಧಿಕಾರಕ್ಕಾಗಿ ಕೆಲಸ ಮಾಡುತ್ತಾರೆ. ಒಂದು ಸಿನೆಮಾ ಸೋಲಿಸಲು 25 ಸಿನಿಮಾ ಬಿಡುತ್ತಾರೆ. ಹಾಗೆಯೇ ರಾಜಕೀಯವೂ ಕೂಡ ಎಂದು ಇದೇ ವೇಳೆ ತಮ್ಮದೆ ಧಾಟಿಯಲ್ಲಿ ವಿಶ್ಲೇಷಿಸಿದರು.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ರಚನೆಗೆ ಮೊದಲೇ ಸಣ್ಣದಾಗಿ ಒಳಜಗಳ ಆರಂಭವಾಗಿದೆ. ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಹೇಳಿಕೆಯನ್ನು ಗಮನಿಸಿರಬಹುದು. ಮುಂದಿನ ದಿನಗಳಲ್ಲಿ ಏನಾಗಬಹುದು ಎಂದು ಕಾದುನೋಡಿ. ಮೈತ್ರಿ ಸರಕಾರ ಎನ್ನುವುದಕ್ಕಿಂತ ಅಪವಿತ್ರ ಮೈತ್ರಿ ಎನ್ನಬೇಕು ಎಂದು ಟೀಕಿಸಿದರು.
ನಾನು ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ. ನಾನು ಒಂದು ಪೈಸೆ ಹಣವನ್ನು ಹಂಚಿಲ್ಲ. ಆದರೆ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ 500ರೂ., 1 ಸಾವಿರ ರೂ.ಹಣ ಹಂಚಿ ಆಯ್ಕೆಯಾಗಿದ್ದಾರೆಂದು ದೂರಿದ ಅವರು, ಜೆಡಿಎಸ್ನಿಂದಲೇ ಬಂದ ಸಿದ್ದರಾಮಯ್ಯ, ದೇವೇಗೌಡರ ಜತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಈ ಸರಕಾರ ಹೆಚ್ಚು ದಿನ ಉಳಿಯದು ಎಂದು ನುಡಿದರು.