‘ನಮ್ಮ ಸರಕಾರಕ್ಕೆ ಬಿಎಸ್ವೈರಿಂದ ಹಣ ಪಾವತಿಸಿಕೊಳ್ಳುವಷ್ಟು ದರಿದ್ರ ಬಂದಿಲ್ಲ’
ಬಿಎಸ್ವೈಗೆ ಸಿಎಂ ಎಚ್ಡಿಕೆ ತಿರುಗೇಟು
ಬೆಂಗಳೂರು, ಜೂ. 7: ‘ನಮ್ಮ ಸರಕಾರಕ್ಕೆ ಯಡಿಯೂರಪ್ಪನವರಿಂದ ಹಣ ಪಾವತಿಸಿಕೊಳ್ಳುವಷ್ಟು ದರಿದ್ರ ಸ್ಥಿತಿ ಬಂದಿಲ್ಲ’ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ತಿರುಗೇಟು ನೀಡಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನರ ಪತ್ರ ನನಗೆ ಇನ್ನೂ ತಲುಪಿಲ್ಲ. ‘ಸಾರ್ವಜನಿಕರ ತೆರಿಗೆ ಹಣವನ್ನು ದುಂದು ವೆಚ್ಚ ಮಾಡುವುದು ಬೇಡಿ’ ಎಂದು ಬಿಎಸ್ವೈ ಅವರನ್ನು ಟೀಕೆ ಮಾಡಲು ಹೇಳಿಲ್ಲ ಎಂದು ಸ್ಪಷ್ಟಣೆ ನೀಡಿದರು.
ಹೆಲಿಕಾಪ್ಟರ್ ಬಳಕೆ ಮಾಡುವುದರಿಂದ ಜನರ ತೆರಿಗೆ ಹಣ ಪೋಲಾಗುತ್ತದೆ. ಹೀಗಾಗಿ ನಾನು ದಿಲ್ಲಿಗೆ ವಿಶೇಷ ವಿಮಾನದಲ್ಲಿ ಹೋಗಿಲ್ಲ. ಒಂದು ವೇಳೆ ನಾನು ದಿಲ್ಲಿಗೆ ವಿಶೇಷ ವಿಮಾನದಲ್ಲಿ ಹೋದರೆ 30ರಿಂದ 40 ಲಕ್ಷ ರೂ.ವೆಚ್ಚವಾಗುತ್ತದೆ. ಆದುದರಿಂದ ದುಂದು ವೆಚ್ಚ ಬೇಡ ಎಂದು ಹೇಳಿದ್ದೇನೆ ಎಂದು ತಿಳಿಸಿದರು.
Next Story