ಬೆಂಗಳೂರು: ಜೂಜಾಡುತ್ತಿದ್ದ 6 ಜನರ ಬಂಧನ
ಬೆಂಗಳೂರು, ಜೂ.20: ಹಣ ಪಣವಾಗಿ ಕಟ್ಟಿಕೊಂಡು ಜೂಜಾಟ ಆಡುತ್ತಿದ್ದ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ಆರು ಜನರನ್ನು ಬಂಧಿಸಿ 40 ಸಾವಿರ ರೂ. ನಗದು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ನಿವಾಸಿಗಳಾದ ನಾಗರಾಜ್(30), ಶಿವಕುಮಾರ(29), ಚಿನ್ನಮುತ್ತು(28), ರಂಗನಾಥ(27), ರಾಜು (38), ಮಾದೇಗೌಡ (31) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ಇಲ್ಲಿನ ಮಾರತ ಹಳ್ಳಿ ಕೃಷ್ಣಾರೆಡ್ಡಿ ಎನ್ನುವ ಕಟ್ಟಡದಲ್ಲಿ ಆರು ಜನರು ಹಣ ಪಣವಾಗಿ ಕಟ್ಟಿಕೊಂಡು ಅಂದರ್-ಬಾಹರ್ ಎಂಬ ಅದೃಷ್ಟದ ಜೂಜಾಟವನ್ನು ಆಡುತ್ತಿದ್ದ ಬಗ್ಗೆ ಮಾಹಿತಿ ಸಂಗ್ರಸಿದ ಸಿಸಿಬಿ ಪೊಲೀಸರು, ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
Next Story