ಬೆಂಗಳೂರು: ರೌಡಿಶೀಟರ್ ದಸ್ತಗೀರ್ ಸೆರೆ
ಬೆಂಗಳೂರು, ಜು.2: ಸರ ಅಪಹರಣ ಪ್ರಕರಣ ಸಂಬಂಧ ರೌಡಿಶೀಟರ್ ಮುಹಮ್ಮದ್ ದಸ್ತಗೀರ್ ಎಂಬಾತನನ್ನು ಇಲ್ಲಿನ ಕಬ್ಬನ್ಪಾರ್ಕ್ ಠಾಣಾ ಪೊಲೀಸರು ಬಂಧಿಸಿದ್ದು, 12 ಪ್ರಕರಣ ದಾಖಲಾಗಿವೆ.
ಆರೋಪಿ ದಸ್ತಗೀರ್ ನಗರದ ಕೆ.ಎಸ್.ಲೇಔಟ್ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಪಟ್ಟಿಯಲ್ಲಿದ್ದು, ದರೋಡೆ, ಸರ ಅಪಹರಣ, ಮನೆಗಳ್ಳತನ ಪ್ರಕರಣಗಳು ದಾಖಲಾಗಿವೆ. ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ಈತ ಹೊರಬಂದು ಮತ್ತೆ ತನ್ನ ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.
ರವಿವಾರ ನಗರದ ಎಂ.ಜಿ.ರಸ್ತೆಯ ಮೆಟ್ರೋ ಸಮೀಪದ ರಂಗೋಲಿ ಆರ್ಟ್ ಗ್ಯಾಲರಿ ಬಳಿ ಶೀತಲ್ ಎಂಬ ಮಳೆಯ ಸರ ಅಪಹರಿಸಲು ಯತ್ನಿಸಿದಾಗ ಮಳೆ ವಿರೋಧ ವ್ಯಕ್ತಪಡಿಸಿದರೂ ಬಿಡದೆ, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಸರ ಕಸಿದುಕೊಂಡು ಪರಾರಿಯಾಗುತ್ತಿದ್ದಾಗ ಬೆನ್ನಟ್ಟಿ ಬಂದ ಸಾರ್ವಜನಿಕರೆ ಹಿಡಿದು ಕಬ್ಬನ್ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
Next Story