ಇತರ ವ್ಯಕ್ತಿಗಳ ಪಾತ್ರ ಪತ್ತೆಯಾಗಿಲ್ಲ, ತನಿಖೆ ಚುರುಕುಗೊಳಿಸಿದ್ದೇವೆ: ಬಿ.ಆರ್.ಬಾಲಕೃಷ್ಣನ್
ಲಾಕರ್ನಲ್ಲಿ ಬಹುಕೋಟಿ ಸಂಪತ್ತು ಪತ್ತೆ ಪ್ರಕರಣ
ಬೆಂಗಳೂರು, ಜು.24: ಬೌರಿಂಗ್ ಇನ್ಸ್ಸ್ಟಿಟ್ಯೂಟ್ನ ಲಾಕರ್ನಲ್ಲಿ ಬಹುಕೋಟಿ ಸಂಪತ್ತು ಪತ್ತೆ ಪ್ರಕರಣ ಸಂಬಂಧ ತನಿಖೆ ಮತ್ತಷ್ಟು ಚುರುಕುಗೊಳಿಸಿದ್ದೇವೆ ಎಂದು ಕರ್ನಾಟಕ-ಗೋವಾ ವಲಯ ತೆರಿಗೆ ಇಲಾಖೆ ಆಯುಕ್ತ ಬಿ.ಆರ್.ಬಾಲಕೃಷ್ಣನ್ ತಿಳಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕರ್ನಲ್ಲಿ ನಗದು, ಆಸ್ತಿ ದಾಖಲೆ ಪತ್ರ ಪತ್ತೆ ಪ್ರಕರಣ ಸಂಬಂಧ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಂದ ತನಿಖೆ ಚುರುಕುಗೊಂಡಿದ್ದು, ಪತ್ತೆಯಾದ ಸಂಪತ್ತು ಕುರಿತು ವಿಚಾರಣೆ ನಡೆಸಿದ್ದೇವೆ. ಪ್ರಕರಣದಲ್ಲಿ ಇತರ ವ್ಯಕ್ತಿಗಳ ಪಾತ್ರ ಇದುವರೆಗೂ ಪತ್ತೆಯಾಗಿಲ್ಲ ಎಂದು ಹೇಳಿದರು.
ಇದೊಂದು ಗಂಭೀರ ಪ್ರಕರಣವೆಂದು ಪರಿಗಣಿಸಿದ್ದೇವೆ. ಅಲ್ಲದೆ, ಇದುವರೆಗೂ ಜಾರಿ ನಿರ್ದೇಶನಾಲಯಕ್ಕೆ ಯಾವುದೇ ಪತ್ರ ಬರೆದಿಲ್ಲ. ಅಗತ್ಯವಿದ್ದಲ್ಲಿ, ಮುಂದೆ ಪತ್ರ ಬರೆಯಲಾಗುವುದು ಎಂದು ಬಾಲಕೃಷ್ಣನ್ ಮಾಹಿತಿ ನೀಡಿದರು.
Next Story