ಜೂಜಾಟ: ಎಂಟು ಜನರ ಬಂಧನ
ಬೆಂಗಳೂರು, ಜು.30: ಹಣವನ್ನು ಪಣವಾಗಿ ಕಟ್ಟಿಕೊಂಡು ಜೂಜಾಟ ನಡೆಸುತ್ತಿದ್ದ ಆರೋಪದಡಿ ನಗರದ ಮಡಿವಾಳ ಠಾಣಾ ಪೊಲೀಸರು, ಎಂಟು ಜನರ ಬಂಧಿಸಿ 28,200 ರೂ. ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.
ನಗರದ ನಿವಾಸಿಗಳಾದ ನದೀಂ(23), ರಾಜ (20), ಗುಲ್ಜಾರ್ ಪಾಷಾ (23), ಸನಾವುಲ್ಲಾ (42), ಮಣಿ (28), ಪ್ರಮೋದ್(31), ಮೌಲ (32), ಸಂತೋಷ್ ಕುಮಾರ್(31)ಬಂಧಿತರು ಎಂದು ಪೊಲೀಸರು ತಿಳಿಸಿದ್ದಾರೆ.
ಜು. 28ರಂದು ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯ ಮಾರುತಿನಗರದ ಪ್ಯಾರಡೈಸ್ ಸೂಟೆಂಬ ಲಾಡ್ಜ್ನಲ್ಲಿ ಎಂಟು ಜನ ಸೇರಿ ಅಂದರ್-ಬಾಹರ್ ಆಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿದ ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ವಿಶೇಷ ವಿಚಾರಣಾ ದಳದವರು ಕಾರ್ಯಾಚರಣೆ ನಡೆಸಿ ಎಂಟು ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Next Story