ಬೆಂಗಳೂರು: ಚಾಲಕನ ಬೆದರಿಸಿ 7 ಲಕ್ಷ ರೂ. ದರೋಡೆ
ಬೆಂಗಳೂರು, ಆ.11: ಚಾಲಕನನ್ನು ಬೆದರಿಸಿ ಕಾರಿನಲ್ಲಿದ್ದ ಏಳು ಲಕ್ಷ ರೂ.ವನ್ನು ದರೋಡೆಕೋರರು ಅಪಹರಿಸಿರುವ ಘಟನೆ ಹೈಗ್ರೌಂಡ್ಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಶುಕ್ರವಾರ ರಾತ್ರಿ ಮೌರ್ಯ ಹೊಟೇಲ್ ಮುಂಭಾಗ ಕಾರು ನಿಲ್ಲಿಸಿದ್ದ ಸಂದರ್ಭ ದರೋಡೆಕೋರರು ಚಾಲಕನನ್ನು ಬೆದರಿಸಿ ಕಾರಿನಲಿದ್ದ ಸೂಟ್ಕೇಸನ್ನು ಕಸಿದು ಪರಾರಿಯಾಗಿದ್ದಾರೆ. ಹೈಗ್ರೌಂಡ್ಸ್ ಠಾಣೆ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
Next Story