ಕೊಡಗು ಮಳೆ ಹಾನಿ: 1 ದಿನದ ವೇತನ ನೀಡಿದ ಪೇದೆ
ಬೆಂಗಳೂರು, ಆ.20: ಧಾರಾಕಾರ ಮಳೆಯಿಂದಾಗಿ ನಲುಗಿರುವ ಕೊಡಗಿನ ಜನರಿಗೆ ನೆರವಾಗಲು ಪೀಣ್ಯ ಠಾಣೆಯ ಪೇದೆಯೊಬ್ಬರು ತಮ್ಮ ಒಂದು ದಿನದ ವೇತನ ನೀಡಿದ್ದಾರೆ.
ಸಂಬಳ ಕಡಿತಗೊಳಿಸುವಂತೆ ಕೋರಿ ಸೋಮವಾರ ಉತ್ತರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋರ್ ಅವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.
ಪೀಣ್ಯ ಪೊಲೀಸ್ ಠಾಣೆಯ ಪೇದೆ ಎಂ.ಕೆ. ಮಂಜುನಾಥ್ ಅವರು ಪತ್ರ ಬರೆದು, ಕಾವೇರಿ ನದಿ ಹುಟ್ಟುವ ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಜನರು ಆಹಾರ, ಬಟ್ಟೆ ಇಲ್ಲದೆ ಒದ್ದಾಟ ನಡೆಸುತ್ತಿರುವುದು ಮನಕಲಕುವಂತಿದೆ. ಅಲ್ಲಿನ ಜನರ ಸಂಕಷ್ಟಕ್ಕೆ ನೆರವಾಗುವ ದೃಷ್ಟಿಯಿಂದ ಆಗಸ್ಟ್ ತಿಂಗಳ ಒಂದು ದಿನದ ಸಂಬಳ ಕಡಿತಗೊಳಿಸಿ, ಮುಖ್ಯಮಂತ್ರಿ ಪರಿಹಾರ ನಿಧಿಗೆ ಜಮೆ ಮಾಡುವಂತೆ ಕೋರಿದ್ದಾರೆ.
Next Story