ಮುಖ್ಯಮಂತ್ರಿಗೆ ರಾಖಿ ಕಟ್ಟಿದ ಮೂಕ ಯುವತಿ
ಬೆಂಗಳೂರು, ಆ.25: ರಕ್ಷಾಬಂಧನದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ವಿಧಾನಸೌಧದಲ್ಲಿ ಮೂಕ ಯುವತಿಯೊಬ್ಬಳು ರಾಖಿ ಕಟ್ಟಿ ಶುಭಾಶಯ ಕೋರಿದರು.
ಯುವತಿಗೆ ಮುಖ್ಯಮಂತ್ರಿ 2 ಸಾವಿರ ರೂ.ನೀಡಲು ಮುಂದಾಗುತ್ತಿದ್ದಂತೆ, ಹಣದ ಬದಲು ಉದ್ಯೋಗ ನೀಡುವಂತೆ ಸನ್ನೆ ಮೂಲಕ ಆಕೆ ತಿಳಿಸಿದರು. ಅವರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ, ಉದ್ಯೋಗ ನೀಡುವ ಭರವಸೆ ನೀಡಿದರು.
Next Story