ನೆರೆ ಸಂತ್ರಸ್ತರಿಗೆ ಎಸ್.ಜಿ.ಸಿದ್ದರಾಮಯ್ಯ, ವಸುಂಧರಾ ಭೂಪತಿ ನೆರವು
ಬೆಂಗಳೂರು, ಆ.27: ನೆರೆ ಪ್ರವಾಹದಿಂದ ನಲುಗಿರುವ ಕೊಡಗಿನ ಸಂತ್ರಸ್ತರಿಗೆ ಸಹಾಯವಾಗಲೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್.ಜಿ.ಸಿದ್ದರಾಮಯ್ಯ 50 ಸಾವಿರ ರೂ. ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ 10 ಸಾವಿರ ರೂ. ನಗದನ್ನು ಸಿಎಂ ಪರಿಹಾರ ನಿಧಿಗೆ ನೀಡಿದ್ದಾರೆ.
ಸೋಮವಾರ ಸಂಜೆ ಗೃಹ ಕಚೇರಿ ಕೃಷ್ಣಾಗೆ ತೆರಳಿದ ಎಸ್.ಜಿ.ಸಿದ್ದರಾಮಯ್ಯ, ವಸುಂಧರಾ ಭೂಪತಿ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಕೈಗೆ ಕೊಡಗಿನ ನೆರೆ ಸಂತ್ರಸ್ತರಿಗೆ ಅನುಕೂಲವಾಗಲೆಂದು ಒಟ್ಟು 60 ಸಾವಿರ ರೂ.ಹಣವನ್ನು ನೀಡಿದರು.
ಈ ಹಣವನ್ನು ಪಡೆದುಕೊಂಡ ಕುಮಾರಸ್ವಾಮಿ, ಶೀಘ್ರದಲ್ಲಿಯೇ ನೀವು ನೀಡಿರುವ ಹಣವನ್ನು ಕೊಡಗಿನ ಜನರಿಗೆ ತಲುಪಿಸಲಾಗುವುದು ಎಂದು ಭರವಸೆ ನೀಡಿದರು ಎಂದು ವಸುಂಧರಾ ಭೂಪತಿ ಮಾಹಿತಿ ನೀಡಿದ್ದಾರೆ.
Next Story