ಗಾಂಜಾ ಮಾರಾಟ ಆರೋಪದಡಿ ನಾಲ್ವರ ಬಂಧನ: 4 ಕೆಜಿ ಗಾಂಜಾ ಜಪ್ತಿ
ಬೆಂಗಳೂರು, ಆ.31: ಮಾದಕ ವಸ್ತು ಗಾಂಜಾ ಮಾರಾಟ ಆರೋಪದಡಿ ನಾಲ್ವರನ್ನು ಬಂಧಿಸಿ, 4 ಕೆಜಿ ಗಾಂಜಾ ಜಪ್ತಿ ಮಾಡುವಲ್ಲಿ ಇಲ್ಲಿನ ಶ್ರೀರಾಂಪುರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ರಾಮಮೂರ್ತಿ ನಗರದ ಜೆ.ನಾರಾಯಣ(35), ಒಡಿಸ್ಸಾ ರಾಜ್ಯದ ಪ್ರತಾಪ್ಕುಮಾರ್(29), ಶ್ರೀಗಂಧ ಕಾವಲು ನಿವಾಸಿ ಅಹ್ಮದ್ ಹಾಗೂ ವೆಂಕಟೇಶ್ ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಶ್ರೀರಾಮಪುರದ ಬ್ರಿಟಾನಿಯ ರಸ್ತೆ ಜಂಕ್ಷನ್ ಬಳಿ ಆಟೊ ರಿಕ್ಷಾದಲ್ಲಿ ನಾಲ್ಕು ವ್ಯಕ್ತಿಗಳು ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಆಧಾರಿಸಿ ಕಾರ್ಯಚರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳಿಂದ 4 ಕೆಜಿ ತೂಕದ ಗಾಂಜಾ ವಶಕ್ಕೆ ಪಡೆದು, ತನಿಖೆ ಮುಂದುವರೆಸಲಾಗಿದೆ.
Next Story