ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂಬ ಬಿಎಸ್ವೈ ಹೇಳಿಕೆಗೆ ಕುಮಾರಸ್ವಾಮಿ ಪ್ರತಿಕ್ರಿಯೆ
ಬೆಂಗಳೂರು, ಸೆ. 6: ‘ಮಾನ ಯಾರಿಗೆ ಇದೆ. ಯಾವ ನಷ್ಟದ ಕೇಸನ್ನು ಬೇಕಾದರೂ ಹಾಕಿಕೊಳ್ಳಲಿ. ಕಾನೂನು ಎದುರಿಸುವ ಶಕ್ತಿ ನನಗೆ ಇನ್ನೂ ಇದೆ’ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾನನಷ್ಟ ಮೊಕದ್ದಮೆ ಹೂಡುವ ಎಚ್ಚರಿಕೆ ನೀಡಿದ ಬಿಎಸ್ವೈಗೆ ತಿರುಗೇಟು ನೀಡಿದ್ದಾರೆ.
ಗುರುವಾರ ರಾಮನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆದಾಯ ತೆರಿಗೆ(ಐಟಿ) ಇಲಾಖೆ ಅಧಿಕಾರಿಗಳನ್ನು ಬಿಎಸ್ವೈ ಪುತ್ರ ಭೇಟಿ ಮಾಡಿದ್ದಾರೆಂಬ ಬಗ್ಗೆ ನಾನು ಸುಖಾಸುಮ್ಮನೆ ಹೇಳಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ಬಿಎಸ್ವೈ ಅವರು ನನ್ನ ವಿರುದ್ಧ ದೂರು ದಾಖಲಿಸಿದ ಬಳಿಕ ಅಗತ್ಯ ಮಾಹಿತಿ ನೀಡುತ್ತೇನೆ. ನಾನು ಎಲ್ಲೂ ಪಲಾಯನ ಮಾಡುವುದಿಲ್ಲ. ಯಾವುದೇ ಚರ್ಚೆ ಮಾಡಬೇಕಾದರೆ ಸೂಕ್ತ ಮಾಹಿತಿಯ ಸಂಗ್ರಹ ಇಟ್ಟುಕೊಂಡೆ ಮಾತನಾಡುತ್ತೇನೆ ಎಂದು ಕುಮಾರಸ್ವಾಮಿ ಸ್ಪಷ್ಟಣೆ ನೀಡಿದರು.
Next Story