ಬೆಂಗಳೂರು: ಜೂಜಾಡುತ್ತಿದ್ದ 12 ಮಂದಿಯ ಸೆರೆ
ಬೆಂಗಳೂರು, ಸೆ.11: ಹಣವನ್ನು ಪಣವಾಗಿ ಕಟ್ಟಿಕೊಂಡು ಜೂಜಾಟ ಆಡುತ್ತಿದ್ದ ಆರೋಪದಡಿ 12 ಮಂದಿ ಆರೋಪಿಗಳನ್ನು ಬಂಧಿಸಿ, 1.84 ಲಕ್ಷ ರೂ. ನಗದು ವಶಕ್ಕೆ ಪಡೆಯುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ವಿಜಯಕುಮಾರ್, ಕಿರಣ್, ಲೋಕೇಶ್, ಸತೀಶ್, ಮುರುಳಿ, ಅಜಿತ್, ಸುಧಾಕರ, ಸಂಪತ್ ಕುಮಾರ್, ಮುತ್ತು, ಅಲೋಕ್, ಹರೀಶ್ ಮತ್ತು ರಾಮಪ್ರಸಾದ್ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಎಚ್ಆರ್ಬಿಆರ್ ಲೇಔಟ್ನ 2ನೆ ಬ್ಲಾಕ್ 4ನೆ ಎ ಕ್ರಾಸ್ನ ಕಟ್ಟಡದ 403ನೆ ಕೊಠಡಿಯಲ್ಲಿ 10ರಿಂದ 12 ಮಂದಿ ಜೂಜಾಟದಲ್ಲಿ ತೊಡಗಿದ್ದಾರೆ ಎಂಬ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
Next Story