ಸೆ.17: ಮುಖ್ಯಮಂತ್ರಿ ಜನತಾದರ್ಶನ ಇಲ್ಲ
ಬೆಂಗಳೂರು, ಸೆ.16: ಸಿಎಂ ಕುಮಾರಸ್ವಾಮಿಯವರು ಜ್ವರದಿಂದ ಬಳಲುತ್ತಿದ್ದು ವಿಶ್ರಾಂತಿ ಪಡೆಯುತ್ತಿದ್ದಾರೆ. ನಾಳೆ ಅವರು ಕಲಬುರಗಿಗೆ ಭೇಟಿ ನೀಡಿ ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಹೀಗಾಗಿ ಜನತಾದರ್ಶನ ಇರುವುದಿಲ್ಲ.
ಕೆಲವು ಪತ್ರಿಕೆಗಳಲ್ಲಿ ಸಿಎಂ ಕುಮಾರಸ್ವಾಮಿ ಜನತಾದರ್ಶನ ನಡೆಸಲಿದ್ದಾರೆಂದು ವರದಿಯಾಗಿದೆ. ಆದರೆ, ಶನಿವಾರದಂದು ಮಾತ್ರ ಜನತಾದರ್ಶನ ನಡೆಸಲಾಗುತ್ತದೆ. ಆದುದರಿಂದ ನಾಳೆ ಕಲಬುರಗಿಯಲ್ಲಿ ಜನತಾದರ್ಶನ ಇರುವುದಿಲ್ಲ ಎಂದು ಸಿಎಂ ಕಚೇರಿಯ ಪ್ರಕಟಣೆ ಸ್ಪಷ್ಟಪಡಿಸಿದೆ.
Next Story