ಸೆ.23ರಂದು ಆರೋಗ್ಯ ಮಾಲಿಕೆಯಡಿ 9 ಪುಸ್ತಕಗಳ ಬಿಡುಗಡೆ
ಬೆಂಗಳೂರು, ಸೆ.19: ವಸಂತ ಪ್ರಕಾಶವು ಸೆ.23ರಂದು ಬೆಳಗ್ಗೆ 10.30ಕ್ಕೆ ನಗರದ ಕಸಾಪ ಆವರಣದ ಅಕ್ಕಮಹಾದೇವಿ ಸಭಾಂಗಣದಲ್ಲಿ ಆರೋಗ್ಯ ಚಿಂತನ ಮಾಲಿಕೆಯಡಿ 9 ಕೃತಿಗಳು ಲೋಕಾರ್ಪಣೆಗೊಳ್ಳಲಿವೆ.
ಹಿರಿಯ ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಕೃತಿಗಳನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ವಿಮರ್ಶಕಿ ಡಾ.ಎಂ.ಎಸ್.ಆಶಾದೇವಿ, ಮನೋವೈದ್ಯ ಡಾ.ಸಿ.ಆರ್.ಚಂದ್ರಶೇಖರ್ ಹಾಗೂ ಆಹಾರ ತಜ್ಞೆ ಡಾ.ಎಚ್.ಎಸ್.ಪ್ರೇಮಾ ಕೃತಿಗಳ ಕುರಿತು ಮಾತನಾಡಲಿದ್ದಾರೆ. ಈ ವೇಳೆ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ವಸುಂಧರಾ ಭೂಪತಿ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ.
ಪುಸ್ತಕಗಳು: ಮಹಿಳೆಯ ಮನೋಲೋಕ(ಡಾ.ಸಿ.ಆರ್.ಚಂದ್ರಶೇಖರ್), ಒತ್ತಡವೂ ನಿಮ್ಮದೇ ಪರಿಹಾರವೂ ನಿಮ್ಮದೇ(ಡಾ.ಸಿ.ಆರ್.ಚಂದ್ರಶೇಖರ್), ಆರೋಗ್ಯ-ಅನಾರೋಗ್ಯದ ನಡುವೆ(ಡಾ.ವಸುಂಧರಾ ಭೂಪತಿ), ಆಹಾರ-ಒಂದು ಸಂಸ್ಕೃತಿ(ಡಾ.ಎಚ್.ಎಸ್.ಪ್ರೇಮಾ). ಋತುಚಕ್ರದ ಸುತ್ತಮುತ್ತ(ಡಾ.ವೀಣಾ ಎಸ್.ಭಟ್), ಆರೋಗ್ಯ ಮಂದಾರ (ಡಾ.ಎನ್.ಗೋಪಾಲಕೃಷ್ಣ), ಮುದ್ದು ಮಗು ಮಿನುಗಲಿ ನಗು(ಡಾ.ಕೆ.ಎಸ್.ಚೈತ್ರಾ), ಕ್ಯಾನ್ಸರ್ ಗೆಲ್ಲುವ ಹಾದಿಯಲ್ಲಿ(ಡಾ.ಬಿ.ಎನ್.ಹೇಮಾದೇವಿ) ಪುಸ್ತಕಗಳು ಬಿಡುಗಡೆಗೊಳ್ಳಲಿವೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.