ಬೆಂಗಳೂರು: ಕುದುರೆ ಜೂಜಾಟ ಅಡ್ಡೆಗೆ ದಾಳಿ; ನಾಲ್ವರ ಬಂಧನ
ಬೆಂಗಳೂರು, ಸೆ.23:ಕುದುರೆ ರೇಸ್ ಜೂಜಾಟ ಅಡ್ಡೆಯ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, ನಾಲ್ವರನ್ನು ಬಂಧಿಸಿ 1 ಲಕ್ಷರೂ. ಅಧಿಕ ಪರಿಕರಗಳ ವಶಕ್ಕೆ ಪಡೆದಿದ್ದಾರೆ.
ನಗರದ ಗಂಗಾಧರ್(43), ಮಂಜುನಾಥ(32), ಜಿ.ಗೋಪಾಲರೆಡ್ಡಿ(42), ಶಿವಣ್ಣ (51) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ನಗರದ ಬಳ್ಳಾರಿ ಮುಖ್ಯರಸ್ತೆಯ ಮುನಿರಾಯಪ್ಪಕಟ್ಟಡದ ಮುಂಭಾಗ ಕೆಲವರು ಹಣ ಪಣವಾಗಿ ಕಟ್ಟಿಕೊಂಡು ಕುದುರೆ ಜೂಜಾಟ ಆಡುತ್ತಿದ್ದ ಬಗ್ಗೆ ಸಿಸಿಬಿ ಪೊಲೀಸರು ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಬಂಧಿತರಿಂದ ವಶದಿಂದ ಜೂಜಾಟಕ್ಕೆ ಸಂಬಂಧಿಸಿದ 1.7 ಲಕ್ಷ ರೂ. ನಗದು, ನಾಲ್ಕು ಮೊಬೈಲ್, ಎರಡು ರೇಸ್ ಪುಸ್ತಕ ವಶಕ್ಕೆ ಪಡೆದು, ಇಲ್ಲಿನ ಆರ್ಟಿನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
Next Story