ಟಿವಿ9 ವಾಹಿನಿ ವಿರುದ್ಧ ವಿಧಾನ ಪರಿಷತ್ ಸದಸ್ಯ ರಮೇಶ್ ಗೌಡ ಸಹೋದರ ದೂರು
ಸುಳ್ಳು ಸುದ್ದಿ ಪ್ರಕಟ, 50 ಲಕ್ಷ ರೂ. ಬೇಡಿಕೆಯ ಆರೋಪ
ಬೆಂಗಳೂರು, ಅ.8: ''ವಿಧಾನ ಪರಿಷತ್ ಸದಸ್ಯ ಎಚ್.ಎಂ. ರಮೇಶ್ ಗೌಡ ಅವರ ಬಗ್ಗೆ ಸುಳ್ಳು ಸುದ್ದಿ ಪ್ರಸಾರ ಮಾಡಿದ ಟಿವಿ9 ವಾಹಿನಿಯ ಆಡಳಿತ ಮಂಡಳಿ, ಆ ಸುದ್ದಿ ಪ್ರಸಾರ ನಿಲ್ಲಿಸಲು 50 ಲಕ್ಷ ರೂ. ಬೇಡಿಕೆ ಇಟ್ಟಿದೆ'' ಎಂದು ರಮೇಶ್ ಗೌಡ ಅವರ ಸಹೋದರ ರಾಜೇಶ್ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಟಿವಿ9 ವಾಹಿನಿಯ ಸಿಬ್ಬಂದಿ ಎನ್ನಲಾದ ಕೆಲವರು ನನ್ನ ಮೊಬೈಲ್ ಗೆ ಕರೆ ಮಾಡಿ ಹಣದ ಬೇಡಿಕೆ ಇಟ್ಟಿದ್ದಾರೆ ಎಂದು ರಾಜೇಶ್ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಸುದ್ದಿ ವಾಹಿನಿಯ 12 ಮಂದಿ ವಿರುದ್ಧ ಪ್ರಕರಣ ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಟಿವಿ9ನ್ನು ‘ವಾರ್ತಾ ಭಾರತಿ’ ಫೋನ್ ಕರೆ ಮೂಲಕ ಸಂಪರ್ಕಿಸಿದ್ದು, ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
Next Story