ಬೆಂಗಳೂರು : ನ್ಯಾಯಾಧೀಶರ ಮುಂದೆಯೇ ಕುತ್ತಿಗೆ ಕೊಯ್ದುಕೊಂಡ ಆರೋಪಿ
ಬೆಂಗಳೂರು, ಅ.16: ಅಪ್ರಾಪ್ತೆ ಬಾಲಕಿ ಮೇಲೆ ಅತ್ಯಾಚಾರ ಆರೋಪ ಹಾಗೂ ಪೋಕ್ಸೋ ಕಾಯ್ದೆಯಡಿ ಬಂಧಿತನಾಗಿದ್ದ ಆರೋಪಿಯೊಬ್ಬ ನ್ಯಾಯಾಧೀಶರ ಮುಂದೆಯೇ ಬ್ಲೇಡಿನಿಂದ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಮಂಗಳವಾರ ನಗರದ ಸೆಷನ್ಸ್ ಕೋರ್ಟ್ ಹಾಲ್ 54ರಲ್ಲಿ ಘಟನೆ ಸಂಭವಿಸಿದ್ದು, ವಿನೋದ್ ಕುಮಾರ್ ಎಂಬ ಆರೋಪಿ ಈ ರೀತಿ ವರ್ತನೆ ಮಾಡಿರುವುದಾಗಿ ತಿಳಿದುಬಂದಿದೆ.
ಇಲ್ಲಿನ ಹೆಣ್ಣೂರು ಠಾಣಾ ಪೊಲೀಸರು ಆರೋಪಿ ವಿನೋದ್ಕುಮಾರ್ನನ್ನು ಪೋಕ್ಸೋ ಕಾಯ್ದೆಯಡಿಯಲ್ಲಿ ಬಂಧಿಸಿದ್ದರು.
ಇಂದು ಪ್ರಕರಣದ ಸಾಕ್ಷಿ ವಿಚಾರಣೆ ಇದ್ದುದರಿಂದ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ತನ್ನ ಪ್ರಕರಣ ಬೇಗ ಇತ್ಯರ್ಥವಾಗುತ್ತದಾ ಎಂಬ ಗೊಂದಲ ಮತ್ತು ಭಯದಲ್ಲಿದ್ದ ವಿನೋದ್ ಕುತ್ತಿಗೆ ಕೊಯ್ದುಕೊಂಡಿರುವುದಾಗಿ ಹೇಳಲಾಗುತ್ತಿದೆ.
ಗಾಯಗೊಂಡ ವಿನೋದಕುಮಾರ್ನನ್ನು ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
Next Story