ಹೈಕೋರ್ಟ್ನಲ್ಲಿ ಐವರು ನೂತನ ನ್ಯಾಯಮೂರ್ತಿಗಳ ಅಧಿಕಾರ ಸ್ವೀಕಾರ
ಬೆಂಗಳೂರು, ನ.5: ರಾಜ್ಯ ಹೈಕೋರ್ಟ್ಗೆ ಐವರು ನ್ಯಾಯಮೂರ್ತಿಗಳನ್ನು ನೇಮಕ ಮಾಡಿ ಕೇಂದ್ರ ಸರಕಾರ ಆದೇಶ ಹೊರಡಿಸಿತ್ತು. ಹೀಗಾಗಿ, ಸೋಮವಾರ ರಾಜ್ಯ ಹೈಕೋರ್ಟ್ನಲ್ಲಿ ನೂತನ ಐದು ಮಂದಿ ನ್ಯಾಯಮೂರ್ತಿಗಳು ಅಧಿಕಾರ ಸ್ವೀಕರಿಸಿದರು.
ನ್ಯಾಯಮೂರ್ತಿಗಳಾದ ಅಶೋಕ್ ಜಿ. ನಿಜಗಣ್ಣನವರ್, ಎಚ್.ಪಿ.ಸಂದೇಶ್, ಕೆ.ನಟರಾಜನ್, ಪಿ.ಜಿ.ಮುತಾಲಿಕ್ ಪಾಟೀಲ್, ಎ.ಎಸ್.ಬೆಳ್ಳುಂಕೆ ಅವರು ಹೈಕೋರ್ಟ್ನಲ್ಲಿ ಅಧಿಕಾರ ಸ್ವೀಕರಿಸಿದರು. ಇನ್ನು ಹೈಕೋರ್ಟ್ ಹಾಲ್ನಲ್ಲಿ ವಕೀಲದ ಸಂಘದಿಂದ ಸ್ವಾಗತ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ, ವಕೀಲರ ಸಂಘದ ಅಧಿಕಾರಿಗಳು, ವಕೀಲರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
Next Story