ಮೀಲಾದುನ್ನಬಿ: ದ.ಕ., ಉಡುಪಿ ಜಿಲ್ಲೆಯಲ್ಲಿ ನ.20ರಂದು ಸಾರ್ವತ್ರಿಕ ರಜೆ
ಬೆಂಗಳೂರು, ನ.19: ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಮೀಲಾದುನ್ನಬಿ ಪ್ರಯುಕ್ತ ನ.20ರಂದು ಸಾರ್ವತ್ರಿಕ ರಜೆ ಘೋಷಿಸಿ ಸರಕಾರ ಇಂದು ಆದೇಶಿಸಿದೆ.
ಈ ಹಿಂದೆ ರಾಜ್ಯಾದ್ಯಂತ ನ.21ರಂದು ಮೀಲಾದುನ್ನಬಿ ಸಾರ್ವತ್ರಿಕ ರಜೆ ಸಾರಲಾಗಿತ್ತು. ಆದರೆ ಕರಾವಳಿ ಜಿಲ್ಲೆಗಳಾದ ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ನ.20ರಂದು ಮೀಲಾದುನ್ನಬಿ ಆಚರಣೆ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ರಾಜ್ಯ ವಕ್ಫ್ ಮಂಡಳಿಯು ಇದೇ ಅಭಿಪ್ರಾಯ ನೀಡಿರುವುದರಿಂದ ಈ ಎರಡು ಜಿಲ್ಲೆಗಳಿಗೆ ಮಾತ್ರ ಅನ್ವಯಯವಾಗುವಂತೆ ನ.20ರಂದು ಸಾರ್ವತ್ರಿಕ ರಜೆ ಘೋಷಿಸಲಾಗಿದೆ ಹಾಗೂ ನ.21ರ ಸಾರ್ವತ್ರಿಕ ರಜೆಯನ್ನು ಹಿಂಪಡೆಯಲಾಗಿದೆ.
ಉಳಿದ ಎಲ್ಲಾ ಜಿಲ್ಲೆಗಳಲ್ಲಿ ನ.21ರಂದು ಮೀಲಾದುನ್ನಬಿ ರಜೆ ಮುಂದುವರಿಯಲಿದೆ ಎಂದು ಸರಕಾರ ಇಂದು ಹೊರಡಿಸಿರುವ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಿದೆ.
Next Story