ಕನಕದಾಸ ಜಯಂತಿಗೆ ಸಚಿವ ಆರ್.ವಿ.ದೇಶಪಾಂಡೆ ಶುಭಾಶಯ
ಬೆಂಗಳೂರು, ನ.24: ಕನಕದಾಸ ಜಯಂತಿಯು ನಾಡಿನೆಲ್ಲೆಡೆ ಸದಾಲೋಚನೆ ಮತ್ತು ಸನ್ಮಾರ್ಗಗಳನ್ನು ಕುರಿತು ಸಾತ್ವಿಕವಾಗಿ ಆಲೋಚಿಸುವ ಪ್ರೇರಣೆಯನ್ನು ಜನರಿಗೆ ನೀಡಲಿ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಶುಭಕೋರಿದ್ದಾರೆ.
ಈ ಬಗ್ಗೆ ಸಂದೇಶ ನೀಡಿರುವ ಅವರು, ಕನಕದಾಸರು ಭಕ್ತಿ ಮತ್ತು ಸಮರ್ಪಣಾ ಮನೋಭಾವಕ್ಕೆ ಇನ್ನೊಂದು ಹೆಸರಾಗಿದ್ದಾರೆ. ಅವರ ಜನುಮದಿನದ ಈ ಸಂದರ್ಭದಲ್ಲಿ ನಾವೆಲ್ಲರೂ ಅವರನ್ನುಅಂತರಂಗದಿಂದ ಸ್ಮರಿಸೋಣ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Next Story