ವಾಯುವಿಹಾರಕ್ಕೆ ಹೋಗಿದ್ದ ಟೆಕ್ಕಿ ನಾಪತ್ತೆ: ತನಿಖೆ ಚುರುಕು
ಬೆಂಗಳೂರು, ಡಿ.1: ವಾಯುವಿಹಾರಕ್ಕೆ ಹೋಗಿದ್ದ ಸಾಫ್ಟ್ವೇರ್ ಇಂಜನಿಯರ್ ನಿಗೂಢವಾಗಿ ಕಣ್ಮರೆಯಾಗಿದ್ದು, ಬನಶಂಕರಿ ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಪದ್ಮನಾಭನಗರದ ನಿವಾಸಿ ಪ್ರಸನ್ನ(39) ಎಂಬುವರು ನ.11ರಂದು ಬೆಳಗ್ಗೆ ಎಂದಿನಂತೆ ವಾಯುವಿಹಾರಕ್ಕೆ ತೆರಳಿದ್ದಾಗ ಮನೆಗೆ ಹಿಂದಿರುಗದೆ ಅಂದಿನಿಂದ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಒಂದು ವರ್ಷದ ಹಿಂದಷ್ಟೇ ಬೆಂಗಳೂರಿಗೆ ಬಂದು ಪತ್ನಿಯೊಂದಿಗೆ ಪದ್ಮನಾಭನಗರದಲ್ಲಿ ನೆಲೆಸಿದ್ದರು. ಕೆಲ ದಿನಗಳ ಹಿಂದೆ ಪ್ರಸನ್ನ ಅವರ ಪತ್ನಿ ಮೊಬೈಲ್ ಸಂದೇಶವೊಂದನ್ನು ಕಳುಹಿಸಿ, ನಿಮ್ಮ ಪತಿ ನಮ್ಮ ಬಳಿ ಇದ್ದಾರೆ. ಪೊಲೀಸರ ಬಳಿ ಹೋಗಬೇಡಿ ಎಂದು ಹೇಳಿದ್ದರು ಎಂದು ತಿಳಿದುಬಂದಿದೆ.
ನಂತರ ಯಾವುದೇ ಸಂಪರ್ಕಕ್ಕೆ ಸಿಕ್ಕಿಲ್ಲ. ಇದರಿಂದ ಆತಂಕಗೊಂಡಿರುವ ಪ್ರಸನ್ನ ಅವರ ಪತ್ನಿ ಈ ಬಗ್ಗೆ ಬನಶಂಕರಿ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಟೆಕ್ಕಿಯ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.
Next Story