ಭೂಗತ ಪಾತಕಿ ರವಿ ಪೂಜಾರಿಯಿಂದ ಜೀವ ಬೆದರಿಕೆ: ರಕ್ಷಣೆ ಕೋರಿ ಡಿಸಿಎಂಗೆ ಅನಿಲ್ ಲಾಡ್ ಮನವಿ
ಮಾಜಿ ಶಾಸಕ ಅನಿಲ್ ಲಾಡ್
ಬೆಂಗಳೂರು, ಡಿ.13: ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಅನಿಲ್ಲಾಡ್ಗೆ ಭೂಗತ ಪಾತಕಿ ರವಿ ಪೂಜಾರಿ ಜೀವ ಬೆದರಿಕೆ ಹಾಕಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಅನಿಲ್ ಲಾಡ್ಗೆ ಬೆಂಗಳೂರಿನ ಶಿವಕುಮಾರ್ ಎಂಬುವವರು 15 ಕೋಟಿ ಹಣ ನೀಡಬೇಕಿತ್ತು. ಆ ಹಣವನ್ನು ವಾಪಾಸ್ಸು ಕೇಳಿದ್ದಕ್ಕೆ ಭೂಗತ ಪಾತಕಿ ರವಿ ಪೂಜಾರಿಯಿಂದ ಜೀವ ಬೆದರಿಕೆ ಹಾಕಿಸಿದ್ದಾರೆ ಎನ್ನಲಾಗಿದೆ.
ಡಿಸೆಂಬರ್ 8ರಂದು ಮೆಸೇಜ್ ಮಾಡಿ ನಿನ್ನನ್ನು ಶೂಟ್ ಮಾಡಿ ಕೊಲ್ಲುವುದಾಗಿ ಅನಿಲ್ ಲಾಡ್ಗೆ ರವಿ ಪೂಜಾರಿ ಎಚ್ಚರಿಕೆ ನೀಡಿದ್ದಾನೆ. ಈ ಕಾರಣದಿಂದ ತನಗೆ ಸೂಕ್ತ ರಕ್ಷಣೆ ನೀಡುವಂತೆ ಅನಿಲ್ ಲಾಡ್ ಡಿಸಿಎಂ ಪರಮೇಶ್ವರ್ ಅವರಲ್ಲಿ ಮನವಿ ಮಾಡಿದ್ದಾರೆ.
Next Story