ಸಿಎಂ ಕುಮಾರಸ್ವಾಮಿ ಮಧ್ಯಪ್ರವೇಶ: ರೈತರಿಗೆ ನೀಡಿದ ನೋಟಿಸ್ ಹಿಂಪಡೆದ ಬ್ಯಾಂಕ್
ಬೆಂಗಳೂರು, ಡಿ.26: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಧ್ಯಪ್ರವೇಶದಿಂದಾಗಿ ರೈತರಿಗೆ ನೀಡಿದ ನೋಟಿಸ್ ಅನ್ನು ರಾಷ್ಟ್ರೀಕೃತ ಬ್ಯಾಂಕ್ ಹಿಂಪಡೆದಿದೆ.
ಸಾಲ ಮರುಪಾವತಿ ಮಾಡುವಂತೆ ಮುಂಡರಗಿ ತಾಲೂಕಿನ ಇಬ್ಬರಿಗೆ ಎಸ್ಬಿಐ ಬ್ಯಾಂಕ್ ನೀಡಿದ್ದ ನೋಟಿಸ್ ಅನ್ನು ಬ್ಯಾಂಕ್ ಹಿಂಪಡೆದಿದ್ದು, ಋಣ ಸಂಧಾನ ಯೋಜನೆಯಡಿ ಬಾಕಿ ಉಳಿದ ಮೊತ್ತಕ್ಕೆ ಶೇ.50ರ ರಿಯಾಯಿತಿಯೊಂದಿಗೆ ಮರುಪಾವತಿ ಮಾಡಲು ಅವಕಾಶ ಕಲ್ಪಿಸಿದೆ.
ಮುಂಡರಗಿ ತಾಲೂಕು ಹೆಸರೂರು ಗ್ರಾಮದ ಶರಣಪ್ಪವೀರಪ್ಪಚನ್ನಾಲಿ ಮತ್ತು ಚನ್ನಬಸವ್ವ ವೀರಪ್ಪಚನ್ನಾಲಿ ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಪಡೆದಿದ್ದ ಸಾಲವು ರಾಜ್ಯ ಸರಕಾರದ ಸಾಲ ಮನ್ನಾ ಯೋಜನೆ ವ್ಯಾಪ್ತಿಗೆ ಬಾರದ ಹಿನ್ನೆಲೆಯಲ್ಲಿ ಬ್ಯಾಂಕ್ ನೋಟಿಸ್ ನೀಡಿತ್ತು. ಆದರೆ, ಈಗ ಮುಖ್ಯಮಂತ್ರಿಗಳ ಮಧ್ಯಪ್ರವೇಶದಿಂದ ಬ್ಯಾಂಕ್ ನೀಡಿದ್ದ ನೋಟಿಸ್ ಹಿಂಪಡೆದಿದೆ.
Next Story