ಜೂಜಾಟ: 26 ಮಂದಿಯ ಬಂಧನ, 1.24 ಲಕ್ಷ ನಗದು ಜಪ್ತಿ
ಬೆಂಗಳೂರು, ಡಿ.26: ಹಣವನ್ನು ಪಣವಾಗಿ ಕಟ್ಟಿಕೊಂಡು ಜೂಜಾಟದಲ್ಲಿ ತೊಡಗಿದ್ದ ಆರೋಪದಡಿ 26 ಜನರನ್ನು ಸಿಸಿಬಿ ಪೊಲೀಸರು ಬಂಧಿಸಿದಾರೆ.
ಜಯನಗರದ 3ನೇ ಬ್ಲಾಕ್ ಪ್ರೆಸಿಡೆಂಟ್ ಹೊಟೇಲ್, ಬ್ಯಾಟರಾಯನಪುರದ ಕಸ್ತೂರಿ ಬಾ ಸಾಮಾಜಿಕ ಸಾಂಸ್ಕೃತಿಕ ಕ್ಲಬ್ ಮೇಲೆ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ದಾಳಿ ವೇಳೆ ಬಂಧಿತರಿಂದ 1.24 ಲಕ್ಷ ನಗದು ಜಪ್ತಿ ಮಾಡಲಾಗಿದೆ ಎಂದು ಸಿಸಿಬಿ ಡಿಸಿಪಿ ಗಿರೀಶ್ ತಿಳಿಸಿದ್ದಾರೆ.
Next Story