ಕಬಡ್ಡಿ ತಂಡಕ್ಕೆ ಮುಖ್ಯಮಂತ್ರಿ ಅಭಿನಂದನೆ
ಬೆಂಗಳೂರು, ಜ. 6: ಪ್ರೊ ಕಬಡ್ಡಿ ಆರನೆ ಆವೃತ್ತಿಯ ಅಂತಿಮ ಪಂದ್ಯದಲ್ಲಿ ಗುಜರಾತ್ ಫಾರ್ಚುನ್ ಜೇನ್ಟ್ಸ್ ವಿರುದ್ಧ ಜಯ ಗಳಿಸಿದ ಬೆಂಗಳೂರು ಬುಲ್ಸ್ ತಂಡದವರನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಭಿನಂದಿಸಿದ್ದಾರೆ.
ನಿನ್ನೆ ಕೈಗೊಂಡಿದ್ದ ರಾಯಚೂರು ಪ್ರವಾಸದ ಬಳಿಕ ಬೆಂಗಳೂರಿಗೆ ಆಗಮಿಸಿದ ಅವರು, ತಮ್ಮ ನೆಚ್ಚಿನ ಕ್ರೀಡೆ ಕಬಡ್ಡಿಯನ್ನು ಟಿವಿಯಲ್ಲಿ ವೀಕ್ಷಿಸಿದರು. ಈ ಪಂದ್ಯದಲ್ಲಿ 5 ಪಾಯಿಂಟ್ ಅಂತರದಲ್ಲಿ ರೋಚಕ ಗೆಲುವನ್ನು ಸಾಧಿಸಿ ಚಾಂಪಿಯನ್ ಆಗಿರುವ ಬೆಂಗಳೂರು ಬುಲ್ಸ್ ತಂಡದವರನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.
Next Story