ಮಾ.8 ರಿಂದ ಯುವಕಾವ್ಯ ಅನುವಾದ ಕಮ್ಮಟ
ಬೆಂಗಳೂರು, ಜ.21: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ವತಿಯಿಂದ ಮಾ.8 ರಿಂದ ಮೂರು ದಿನಗಳವರೆಗೆ ರಾಯಚೂರಿನಲ್ಲಿ ಹೊಸ ಶತಮಾನದ ಯುವಕಾವ್ಯ ಕನ್ನಡ-ಉರ್ದು, ಉರ್ದು-ಕನ್ನಡ ಅನುವಾದ ಕಮ್ಮಟ ಏರ್ಪಡಿಸಲಾಗಿದೆ.
ಭಾಗವಹಿಸಲಿಚ್ಛಿಸುವ ಅನುವಾದಕರು ಅನುವಾದ ಕ್ಷೇತ್ರದಲ್ಲಿನ ತಮ್ಮ ಆಸಕ್ತಿ ಮತ್ತು ಈ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿರುವ ಸ್ವವಿವರಗಳನ್ನು ಫೆ.15ರೊಳಗೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 080-2318 3312 ಅನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.
Next Story