ಬಿಬಿಎಂಪಿ ಸದಸ್ಯರಿಂದ ಸಿದ್ದಗಂಗಾ ಶ್ರೀಗಳಿಗೆ ಪುಷ್ಪನಮನ
ಬೆಂಗಳೂರು, ಜ.22: ಕರ್ನಾಟಕ ರತ್ನ, ಶತಾಯುಷಿ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರ ನಿಧನಕ್ಕೆ ಸಂತಾಪ ಸೂಚಿಸಿ, ಅವರ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸಲಾಯಿತು.
ಮಂಗಳವಾರ ನಗರದ ಬೈರಸಂದ್ರ ವಾರ್ಡ್ನಲ್ಲಿ ಬಿಬಿಎಂಪಿ ಸದಸ್ಯರು ಹಮ್ಮಿಕೊಂಡಿದ್ದ, ಸಂತಾಪ ಸೂಚನೆ ವೇಳೆ ಶಾಲಾ ಮಕ್ಕಳು, ನಾಗರಿಕರು, ಸ್ವಾಮೀಜಿ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸಿ, ಗೌರವ ಸೂಚಿಸಿದರು.
ಬಳಿಕ ಬಿಬಿಎಂಪಿ ಸದಸ್ಯ ಎನ್.ನಾಗರಾಜು ಮಾತನಾಡಿ, ತ್ರಿವಿಧ ದಾಸೋಹ ಮೂಲಕ ವಿಶ್ವಕಂಡ ಮಹಾ ಶಿವಭಕ್ತರಾದ ಸಿದ್ಧಗಂಗಾ ಡಾ.ಶಿವಕುಮಾರ ಸ್ವಾಮೀಜಿಗಳಿಗೆ ಭಾರತ ರತ್ನ ಪುರಸ್ಕಾರ ಪ್ರದಾನಿಸಿ, ಗೌರವಿಸಿದರೆ, ಆ ಪುರಸ್ಕಾರಕ್ಕೆ ಹೆಚ್ಚು ಮಹತ್ವ ಲಭಿಸುತ್ತದೆ ಎಂದು ನುಡಿದರು.
Next Story