ಕುಮಾರಸ್ವಾಮಿ ಬಜೆಟ್ ಮಂಡಿಸುವುದು ಅನುಮಾನ: ರೇಣುಕಾಚಾರ್ಯ
ಬೆಂಗಳೂರು, ಫೆ.4: ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್ ಮಂಡನೆ ಮಾಡುವ ಸಂಬಂಧ ಮೈತ್ರಿ ಪಕ್ಷಗಳ ನಾಯಕರಲ್ಲಿಯೇ ಸ್ಪಷ್ಟತೆಯಿಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವ್ಯಂಗ್ಯವಾಡಿದ್ದಾರೆ.
ಯಡಿಯೂರಪ್ಪ ನಿವಾಸದಲ್ಲಿ ನಡೆದ ಸಭೆಗೂ ಮುನ್ನ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಬಜೆಟ್ ಮಂಡನೆ ಮಾಡ್ತೀವಿ ಅನ್ನೋ ವಿಶ್ವಾಸ ಸಿಎಂ, ಕಾಂಗ್ರೆಸ್ ಪಕ್ಷದ ನಾಯಕರಲ್ಲಿಯೇ ಇಲ್ಲ. ಇನ್ನು ನಮಗೆ ಹೇಗಿರಲಿದೆ. ಇದನ್ನೆಲ್ಲಾ ನೋಡಿದರೆ ಬಜೆಟ್ ಮಂಡನೆ ಅನುಮಾನದಂತೆ ಕಾಣುತ್ತದೆ ಎಂದು ಹೇಳಿದರು.
ಶಾಸಕ ಮುನಿರತ್ನ 50 ಕೋಟಿ ವೆಚ್ಚದ ಸಿನಿಮಾವನ್ನು ಐದು 5 ಕೋಟಿಗೆ ಬೆಟ್ಟಿಂಗ್ ಇಡ್ತಾರೆ. ಅಷ್ಟು ಹಣ ಎಲ್ಲಿಂದ ಬರುತ್ತದೆ. ಇದು ಲೂಟಿ ಹೊಡೆದಿರುವ ಹಣ. ಒಬ್ಬ ಶಾಸಕನಾಗಿ ಈ ರೀತಿ ಗ್ಯಾಂಬ್ಲಿಂಗ್ಗೆ ಪ್ರಚೋದನೆ ಮಾಡೋದು ಸರಿಯಲ್ಲ, ಕೂಡಲೇ ಮುನಿರತ್ನರನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕು ಎಂದು ಅವರು ಒತ್ತಾಯಿಸಿದರು.
Next Story