ಕಾರನ್ನು ಅಡ್ಡಗಟ್ಟಿ 1 ಲಕ್ಷ ನಗದು, ಮೊಬೈಲ್ ಕಳವು
ಬೆಂಗಳೂರು, ಮಾ.5: ಕಾರನ್ನು ಇಬ್ಬರು ಅಡ್ಡಗಟ್ಟಿ 1ಲಕ್ಷ ಹಣ ಹಾಗೂ ಮೊಬೈಲ್ನ್ನು ದೋಚಿ ಪರಾರಿಯಾಗಿರುವ ಘಟನೆ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಡಿಜೆ ಹಳ್ಳಿ ಚಿಕ್ಕಬಾಣಸವಾಡಿ ನಿವಾಸಿಯಾದ ಝಾಫರ್ ಖಾನ್ ಎಂಬುವರು ಸೋಫಾ ತಯಾರು ವೃತ್ತಿ ಮಾಡುತ್ತಿದ್ದು, ಇಬ್ಬರು ಸ್ನೇಹಿತರೊಂದಿಗೆ ಚಿಂತಾಮಣಿಗೆ ಟಾಟಾ ಸುಮೋದಲ್ಲಿ ತೆರಳಿದ್ದರು ಎನ್ನಲಾಗಿದೆ.
ಸೋಮವಾರ ಬೆಳಗಿನ ಜಾವ ಬೆಂಗಳೂರಿಗೆ ವಾಪಸ್ ಆಗುತ್ತಿದ್ದಾಗ ಡಿಜೆಹಳ್ಳಿಯ 7ನೇ ಕ್ರಾಸ್ನಲ್ಲಿ ಇಬ್ಬರು ದರೋಡೆಕೋರರು ಬೈಕ್ನಲ್ಲಿ ಹಿಂಬಾಲಿಸಿಕೊಂಡು ಬಂದು ವಾಹನವನ್ನು ತಡೆದು ಚಾಕುನಿಂದ ಮೂವರನ್ನು ಬೆದರಿಸಿ ಝಾಫರ್ ಖಾನ್ ಬಳಿಯಿದ್ದ 30 ಸಾವಿರ ಸ್ನೇಹಿತರ ಬಳಿದ್ದ 50 ಸಾವಿರ ಹಾಗೂ 20 ಸಾವಿರ ಹಣವನ್ನು ಹಾಗೂ ಮೊಬೈಲ್ಗಳನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ.
ಈ ಬಗ್ಗೆ ಬಾಣಸವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
Next Story