ವಿಡಿಯೊ ಚಿತ್ರಿಕರಿಸಿ ಆತ್ಮಹತ್ಯೆಗೆ ಶರಣಾದ ಆಟೊ ಚಾಲಕ
ಬೆಂಗಳೂರು, ಮಾ.23: ಆಟೊ ಚಾಲಕನೊರ್ವ ವಿಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವೆಂಕಟೇಶ್ ಎಂಬುವರು ಆತ್ಮಹತ್ಯೆ ಮಾಡಿಕೊಂಡಿರುವ ಆಟೊ ಚಾಲಕ ಎಂದು ಪೊಲೀಸರು ಗುರುತಿಸಿದ್ದಾರೆ.
ಮೃತ ವೆಂಕಟೇಶ ಪತ್ನಿ ವಿಚ್ಛೇಧನ ಪಡೆದುಕೊಂಡಿದ್ದಳು. ಸಾಲದ ಸುಳಿಗೆ ಸಿಲುಕಿದ್ದ ವೆಂಕಟೇಶ್ ಮನೆ ಸೇರಿದಂತೆ ಆಸ್ತಿಯನ್ನು ಮಾರಾಟ ಮಾಡಿಕೊಂಡು ಸುಬೇದಾರ್ ಪಾಳ್ಯದಲ್ಲಿ ವಾಸವಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ವೆಂಕಟೇಶನಿಗೆ ಮನೆ ಸಮೀಪದ ಯಶೋಧಾ ಎಂಬ ಮಹಿಳೆ ಪರಿಚಯವಾಗಿತ್ತು. ಆಕೆಯ ಬಳಿಯೂ ಸಾಲ ಪಡೆದು, ಮದ್ಯದ ಸೇವನೆ ಮಾಡುತ್ತಿದ್ದ ಎನ್ನಲಾಗಿದೆ. ಸಾಲದ ವಿಚಾರವಾಗಿ ಯಶೋಧಾ, ಆಟೋ ಚಾಲಕ ವೆಂಕಟೇಶ್ನೊಂದಿಗೆ ಗಲಾಟೆ ನಡೆದಿತ್ತು. ಇದರಿಂದ ಮನನೊಂದು ಶುಕ್ರವಾರ ಬೆಳಗ್ಗೆ ಮೊಬೈಲ್ನಲ್ಲಿ ವಿಡಿಯೊ ಚಿತ್ರಿಕರಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರು ಹೇಳಿದರು.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಯಶವಂತಪುರ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.