ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರೈಗೆ ಎಸ್ಯುಸಿಐ ಬೆಂಬಲ
ಬೆಂಗಳೂರು, ಮಾ. 27: ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಪ್ರಕಾಶ್ ರಾಜ್ ಅವರನ್ನು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಎಸ್ಯುಸಿಐ) ಬೆಂಬಲಿಸಬೇಕೆಂದು ಕ್ಷೇತ್ರದ ಮತದಾರರಿಗೆ ಮನವಿ ಮಾಡಿದೆ.
ಜನಪರ ಹಿತಾಸಕ್ತಿಗಳನ್ನು ಒಟ್ಟುಕೊಂಡಿರುವ ಪ್ರಕಾಶ್ ರಾಜ್ ಅವರನ್ನು ಕ್ಷೇತ್ರದ ಮತದಾರರು ತಮ್ಮ ಮತಗಳನ್ನು ನೀಡುವ ಮೂಲಕ ಭಾರೀ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಎಸ್ಯುಸಿಐ ಕಾರ್ಯದರ್ಶಿ ಕೆ.ಉಮಾ ಪ್ರಕಟಣೆಯಲ್ಲಿ ಕೋರಿದ್ದಾರೆ.
Next Story