ಸಿನಿಮಾ ಚಿತ್ರೀಕರಣ ವೇಳೆ ತಾಯಿ-ಮಗಳು ಮೃತ್ಯು; ಮೊಬೈಲ್ ಟವರ್ ಏರಿ ಕುಟುಂಬದ ಸದಸ್ಯರಿಂದ ಪ್ರತಿಭಟನೆ
ಬೆಂಗಳೂರು, ಮಾ.31: ರಣಂ ಕನ್ನಡ ಸಿನಿಮಾ ಚಿತ್ರೀಕರಣ ವೇಳೆ ಸಿಲಿಂಡರ್ ಸ್ಫೋಟಗೊಂಡು ತಾಯಿ-ಮಗಳು ಮೃತಪಟ್ಟ ಪ್ರಕರಣ ಸಂಬಂಧ, ತಮಗೆ ನ್ಯಾಯ ಒದಗಿಸುವಂತೆ ಮೃತರ ಕುಟುಂಬ ಸದಸ್ಯರು ಆಳಲು ತೊಡಿಕೊಂಡರು.
ರವಿವಾರ ನಗರದ ಬಾಗಲೂರು ಬಳಿ ಮೃತ ಸಮೀನಾ ಬಾನು ಅವರ ಸಂಬಂಧಿಕರಾದ ಮುನಾವರ್ ಖಾನ್, ಮೆಹಬೂಬ್ ಖಾನ್, ಮನ್ಸೂರ್ ಹಾಗೂ ವಾಹೀದ್ ಅವರು, ಮೊಬೈಲ್ ಟವರ್ ಏರಿ ಪ್ರತಿಭಟನೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುನಾವರ್ ಖಾನ್, ಘಟನೆಯಲ್ಲಿ ಮತ್ತೊಂದು ಮಗು ಝೈನಬಾ ಎಂಬಾಕೆಗೆ ಗಂಭೀರ ಗಾಯಗಳಾಗಿವೆ. ಆದರೆ, ಘಟನೆ ಬಳಿಕ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಚಿತ್ರತಂಡ ಪರಾರಿಯಾಗಿದೆ. ಇದುವರೆಗೂ ಯಾರು ತಮ್ಮ ಕುಟುಂಬಕ್ಕೆ ಭೇಟಿ ಮಾಡಿಲ್ಲ ಎಂದರು.
ತಮ್ಮ ಕುಟುಂಬಕ್ಕೆ ಅನ್ಯಾಯವಾಗಿದೆ. ಆದರೂ, ಪೊಲೀಸರು ಇದುವರೆಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿಲ್ಲ. ಇನ್ನೂ, ಸಿನೆಮಾ ತಂಡದ ಪ್ರಮುಖರು ಭೇಟಿ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
Next Story