ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಹಲ್ಲೆ: ಐವರ ಬಂಧನ
ಬೆಂಗಳೂರು, ಎ.24: ಕ್ಷುಲ್ಲಕ ಕಾರಣಕ್ಕೆ ಯುವಕನೋರ್ವನ ಮೇಲೆ ಮದ್ಯದ ಬಾಟಲಿಯಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದ ಐವರನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿ, ಕೃತ್ಯಕ್ಕೆ ಬಳಸಲಾಗಿದ್ದ ಬೈಕ್, ಆಟೊ ರಿಕ್ಷಾ, ಮೊಬೈಲ್ಗಳನ್ನು ಜಪ್ತಿ ಮಾಡಿದ್ದಾರೆ.
ಚೇಳಿಕೆರೆ ನಿವಾಸಿಗಳಾದ ವಿನೀತ್(22), ಷೇರ್ಸಿಂಗ್(37), ಸಂತೋಷ್(30), ಅನಿಲ್ ಕುಮಾರ್(25) ಹಾಗೂ ಸುಜನ ನಗರದ ಅಶೋಕ(40) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಮದ್ಯದ ಮತ್ತಿನಲ್ಲಿ ಎ.20ರಂದು ಹೆಣ್ಣೂರು ಬಂಡೆಯಲ್ಲಿರುವ ರಾಜೇಶ್ವರಿ ಮದ್ಯದ ಅಂಗಡಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಜಾನ್ ರಾಕೇಶ್ ಎಂಬ ಯುವಕನ ಮೇಲೆ ಮದ್ಯದ ಬಾಟಲಿಯಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಈ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡಿದ್ದರು.
Next Story