ಅಕ್ಷಯ ತೃತೀಯ: ಚಿನ್ನ ಬಿಟ್ಟು ನೀರನ್ನು ಪೂಜಿಸಿ- ಐಎಎಸ್ ಅಧಿಕಾರಿ ಶಾಲಿನಿ ರಜನೀಶ್
ಬೆಂಗಳೂರು, ಎ.29: ಮುಂಬರುವ ಅಕ್ಷಯ ತೃತೀಯ ದಿನದಂದು, ಚಿನ್ನಾಭರಣ ಬದಲಾಗಿ ನೀರನ್ನು ಪೂಜಿಸಿ ಎಂದು ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ಸಲಹೆ ಮಾಡಿದ್ದಾರೆ.
ಈ ಕುರಿತು ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಅಕ್ಷಯ ತೃತೀಯ ದಿನದಂದು ಚಿನ್ನ, ಬೆಳ್ಳಿ, ವಜ್ರ ಖರೀದಿ ಮಾಡೋದು ಅಲ್ಲ. ಚಿನ್ನ-ಬೆಳ್ಳಿಗಿಂತ ನೀರು ಜೀವನಕ್ಕೆ ಮುಖ್ಯ. ಹೀಗಾಗಿ, ಅಕ್ಷಯ ತೃತೀಯ ದಿನ ಪೂಜಾ ಮನೆಯಲ್ಲಿ ನೀರು ಇಟ್ಟು ಸಂವೃದ್ಧಿಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿ ಎಂದಿದ್ದಾರೆ.
ಐಎಎಸ್ ಅಧಿಕಾರಿಯ ಈ ಬರಹಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೇ 7ರಂದು ಅಕ್ಷಯ ತೃತೀಯ ಆಚರಣೆ ಮಾಡಲಾಗುತ್ತದೆ.
Next Story