ಪೆಟ್ರೋಲ್ ಇಲ್ಲವೆಂದು, ಬೈಕ್ ಬಿಟ್ಟು ಹೋದ ಕಳ್ಳರು!
ಬೆಂಗಳೂರು, ಮೇ 13: ಕಳವು ಮಾಡಿದ ಬೈಕ್ನಲ್ಲಿ ಪೆಟ್ರೋಲ್ ಇಲ್ಲವೆಂದು ತಿಳಿದು, ಪುನಃ ಅದೇ ಜಾಗದಲ್ಲಿ ಬೈಕ್ ನಿಲ್ಲಿಸಿ ಹೋಗಿರುವ ಘಟನೆ ಇಲ್ಲಿನ ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಮತ್ತಿಕೆರೆಯ 6ನೇ ಅಡ್ಡ ರಸ್ತೆಯ ಇಂಜಿನಿಯರಿಂಗ್ ವಿದ್ಯಾರ್ಥಿ ನದೀಮ್, ಎಂದಿನಂತೆ ತಮ್ಮ ನಿವಾಸದ ಮುಂದೆ ಬೈಕ್ ನಿಲ್ಲಿಸಿದ್ದರು. ರವಿವಾರ ರಾತ್ರಿ ಸಮಯದಲ್ಲಿ ಸ್ಥಳಕ್ಕೆ ಬಂದಿದ್ದ ದುಷ್ಕರ್ಮಿಗಳು ನಕಲಿ ಕೀ ಬಳಸಿ ಬೈಕ್ ಕಳವು ಮಾಡಿದರು. ಬಳಿಕ, ಸ್ವಲ್ಪ ದೂರು ಬೈಕ್ ಅನ್ನು ತಳ್ಳಿಕೊಂಡು ಹೋದಾಗ ಪೆಟ್ರೋಲ್ ಖಾಲಿ ಆಗಿದೆ. ತಡರಾತ್ರಿ ಪೆಟ್ರೊಲ್ ದೊರೆಯುವುದಿಲ್ಲ ಎಂದು ತಿಳಿದು ವಾಪಸ್ಸು ತಂದುಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
ದುಷ್ಕರ್ಮಿಗಳ ಎಲ್ಲ ಚಲನವಲನಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Next Story