ಬೈಕ್ಗಳ ನಡುವೆ ಅಪಘಾತ: ಯುವಕ ಮೃತ್ಯು
ಬೆಂಗಳೂರು, ಜೂ.2: ಬೈಕ್ಗಳ ನಡುವೆ ಢಿಕ್ಕಿ ಸಂಭವಿಸಿ ಓರ್ವ ಮೃತಪಟ್ಟು, ಮೂವರು ಗಾಯಗೊಂಡಿರುವ ದುರ್ಘಟನೆ ಕುಮಾರಸ್ವಾಮಿ ಲೇಔಟ್ನ ಸಾರಕ್ಕಿ ಮಾರುಕಟ್ಟೆ ಬಳಿ ನಡೆದಿದೆ ಎಂದು ವರದಿಯಾಗಿದೆ.
ಹಾರೋಹಳ್ಳಿಯ ಸಿಖಂದರ್(23) ಮೃತಪಟ್ಟ ಯುವಕನಾಗಿದ್ದು, ಗಾಯಗೊಂಡಿರುವ ಮೂವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಎಲೆಕ್ಟ್ರಿಕ್ ಕೆಲಸ ಮಾಡುತ್ತಿದ್ದ ಸಿಖಂದರ್, ನೂರುಲ್ಲಾ ಅವರ ಬೈಕ್ನಲ್ಲಿ ಹಿಂಬದಿ ಕುಳಿತುಕೊಂಡು ಸಿದ್ದಯ್ಯ ರಸ್ತೆಯಲ್ಲಿದ್ದ ತಂಗಿಗೆ ಉಡುಗೊರೆಯಾಗಿ ಸೀರೆ ಕೊಟ್ಟು ಬರಲು ರಾತ್ರಿ 1ರ ವೇಳೆ ಹಾರೋಹಳ್ಳಿಯಿಂದ ಹೋಗುತ್ತಿದ್ದರು.
ಮಾರ್ಗಮಧ್ಯೆ ಸಾರಕ್ಕಿ ಮಾರುಕಟ್ಟೆ ಬಳಿ ವೇಗವಾಗಿ ಬಂದ ಬುಲೆಟ್ ಬೈಕ್ ಢಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಪ್ರಕರಣ ದಾಖಲಿಸಿರುವ ಕುಮಾರಸ್ವಾಮಿ ಲೇಔಟ್ ಸಂಚಾರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
Next Story