ಪೊಲೀಸ್ ಸಿಬ್ಬಂದಿಗೆ ತಂತ್ರಜ್ಞಾನದ ಮಾಹಿತಿ ಅಗತ್ಯ: ಟಿ.ಸುನೀಲ್ ಕುಮಾರ್
ಬೆಂಗಳೂರು, ಜೂ.12: ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ತಂತ್ರಜ್ಞಾನದ ಮಾಹಿತಿ ಅಗತ್ಯತೆ ಇದೆ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ಕುಮಾರ್ ಇಂದಿಲ್ಲಿ ಹೇಳಿದರು.
ಬುಧವಾರ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಐ-ಫೋಕಸ್ ಕಂಪೆನಿ ವತಿಯಿಂದ ಹಮ್ಮಿಕೊಂಡಿದ್ದ ಬೌದ್ಧಿಕ ಸ್ವತ್ತು ಹಕ್ಕು(ಐಪಿಆರ್) ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನವು ಬಹಳ ಮುಂದುವರಿದಿದ್ದು, ನಮ್ಮ ಇಲಾಖೆಗೆ ಪೇದೆಗಳು ಸೇರಿದಂತೆ ಎಲ್ಲ ಹಂತದ ಅಧಿಕಾರಿಗಳಿಗೂ ಬೌದ್ಧಿಕ ಸ್ವತ್ತು ಹಕ್ಕು(ಐಪಿಆರ್) ಮತ್ತು ತಂತ್ರಜ್ಞಾನ ಮಾಹಿತಿ ದೊರೆಯುವಂತೆ ಆಗಬೇಕು. ಹೀಗಾಗಿ, ಇಂತಹ ಕಾರ್ಯಾಗಾರಗಳು ಅಗತ್ಯ ಎಂದರು.
ಈ ಸಂದರ್ಭದಲ್ಲಿ ಐ-ಪೋಕಸ್ ಕಂಪೆನಿಯ ನಿರ್ದೇಶಕಿ ಜ್ಯೋತಿ ಎಸ್.ಗಾಣಿಗರ್, ವೀರಾಜ್ ಗೌರವ್ ಸೇರಿದಂತೆ ಪ್ರಮುಖರಿದ್ದರು.
Next Story