ಪೊಲೀಸರ ಪರಿಹಾರ ಭತ್ತೆ ಹೆಚ್ಚಳ
ಬೆಂಗಳೂರು, ಜೂ.19: ರಾಜ್ಯ ಪೊಲೀಸ್ ಇಲಾಖೆಯ ಪೇದೆಗಳ ಮಾಸಿಕ ಕಷ್ಟ ಪರಿಹಾರ ಭತ್ತೆಯನ್ನು 1 ಸಾವಿರ ರೂಪಾಯಿ ಹೆಚ್ಚಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಬುಧವಾರ ಆದೇಶ ಹೊರಡಿಸಿರುವ ರಾಜ್ಯ ಸರಕಾರ, 6ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸಿನ ಮೇರೆಗೆ ಪೊಲೀಸ್ ಇಲಾಖೆಯ ಪೊಲೀಸ್ ಪೇದೆಗಳಿಗೆ ಮಂಜೂರು ಮಾಡಿರುವ ಮಾಸಿಕ 1 ಸಾವಿರ ರೂ. ಕಷ್ಟ ಪರಿಹಾರ ಭತ್ತೆ ಮುಂದುವರೆಸಲಾಗಿದೆ ಎಂದು ತಿಳಿಸಿದೆ.
2019-20 ಆಯವ್ಯಯ ಭಾಷಣದಲ್ಲಿ ಕಷ್ಟ ಪರಿಹಾರ ಭತ್ತೆ ಹೆಚ್ಚಿಸುವ ಕುರಿತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದರು. ಅದರಂತೆ, 1 ಸಾವಿರ ರೂ. ಇದ್ದ ಕಷ್ಟ ಪರಿಹಾರ ಭತ್ತೆಯನ್ನು 2 ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ ಸರಕಾರದ ಪ್ರಕಟನೆ ತಿಳಿಸಿದೆ.
Next Story