ಬಾಗಿಲು ಬಿದ್ದು ಭದ್ರತಾ ಸಿಬ್ಬಂದಿ ಮೃತ್ಯು
ಬೆಂಗಳೂರು, ಜೂ.30: ಕಬ್ಬಿಣದ ಬಾಗಿಲು ಬಿದ್ದು ಭದ್ರತಾ ಸಿಬ್ಬಂದಿಯೊಬ್ಬರು ಮೃತಪಟ್ಟಿರುವ ಘಟನೆ ಸದಾಶಿವನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಲ್ಲೇಶ್ವರಂನ ಟಾಟಾ ಇನ್ಸ್ಟಿಟ್ಯೂಟ್ನ ಮುಖ್ಯ ದ್ವಾರದ ಬಳಿ ನಡೆದಿದೆ.
ಭದ್ರತಾ ಸಿಬ್ಬಂದಿ ಗೌತಮ್ ಬಿಸ್ವಾಸ್ ಮೃತ ವ್ಯಕ್ತಿ ಎಂದು ತಿಳಿದುಬಂದಿದೆ.
ಟಾಟಾ ಇನ್ಸ್ಟಿಟ್ಯೂಟ್ನ ಮುಖ್ಯ ದ್ವಾರದ ಬಳಿ ಎಂದಿನಂತೆ ಭದ್ರತಾ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದರು. ಆದರೆ, ರವಿವಾರ ಮಧ್ಯಾಹ್ನ ಕೆಲಸದ ವೇಳೆ ಭದ್ರತಾ ಸಿಬ್ಬಂದಿ ಗೌತಮ್ ತಲೆಮೇಲೆ ಹೊಸದಾಗಿ ಅಳವಡಿಸಿದ್ದ ಬಾಗಿಲು ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ. ಆದರೆ ಆಸ್ಪತ್ರೆಗೆ ಕೊಂಡೊಯ್ಯುವ ದಾರಿಮದ್ಯೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತಿಭಟನೆ: ಟಾಟಾ ಇನ್ಸ್ಟಿಟ್ಯೂಟ್ನ ಮುಖ್ಯ ದ್ವಾರಕ್ಕೆ ಹೊಸದಾಗಿ ಬಾಗಿಲು ಅಳವಡಿಸಲಾಗಿತ್ತು. ಅದರ ಕಾಮಗಾರಿ ಕಳಪೆಯಾಗಿದೆ ಎಂದು ಭದ್ರತಾ ಸಿಬ್ಬಂದಿಗಳು ಆರೋಪಿಸಿ, ಅದನ್ನು ಬದಲಾವಣೆ ಮಾಡಲು ಸುಮಾರು ನಾಲ್ಕು ತಿಂಗಳಿಂದ ಮನವಿ ಮಾಡಿದ್ದರು. ಆದರೂ ಟಾಟಾ ಇನ್ಸ್ಟಿಟ್ಯೂಟ್ನವರು ಕಿವಿಗೆ ಹಾಕಿಕೊಂಡಿರಲಿಲ್ಲ. ಈಗ ಅವರ ನಿರ್ಲಕ್ಷ್ಯದಿಂದ ಈ ಅನಾಹುತ ನಡೆದಿದೆ ಎಂದು ಆರೋಪಿಸಿ ಆ್ಯಂಬುಲೆನ್ಸ್ನಲ್ಲಿ ಶವ ಇಟ್ಟು ಕೆಲ ಕಾಲ ಪ್ರತಿಭಟನೆ ನಡೆಸಿದರು.