ವಿಧಾನಸೌಧಕ್ಕೆ ಹಾಜರಾದ ಅತೃಪ್ತ ಶಾಸಕರಿಗೆ ‘ಝೀರೋ ಟ್ರಾಫಿಕ್’
ಬೆಂಗಳೂರು, ಜು.11: ರಾಜೀನಾಮೆ ಪತ್ರ ಸಲ್ಲಿಕೆ ಸಂಬಂಧ ವಿಧಾನಸೌಧಕ್ಕೆ ಹಾಜರಾದ ಕಾಂಗ್ರೆಸ್-ಜೆಡಿಎಸ್ ಅತೃಪ್ತ ಶಾಸಕರಿಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ಶಾಸಕರು ಖುದ್ದು ವಿಧಾನಸಭೆ ಸಭಾಧ್ಯಕ್ಷ ರಮೇಶ್ ಕುಮಾರ್ ಅವರಿಗೆ ರಾಜೀನಾಮೆ ಸಲ್ಲಿಸಬೇಕು ಎಂದು ಸುಪ್ರೀಂ ಕೋಟ್ ಆದೇಶ ನೀಡಿದ್ದ ಈ ಹಿನ್ನೆಲೆ ಮುಂಬೈ ಖಾಸಗಿ ಹೊಟೇಲ್ನಲ್ಲಿದ್ದ ಶಾಸಕರು, ವಿಶೇಷ ವಿಮಾನದಲ್ಲಿ ಗುರುವಾರ ಸಂಜೆ 5ಕ್ಕೆ ಬೆಂಗಳೂರಿನ ಎಚ್ಎಎಲ್ ತಲುಪಲಿದ್ದಾರೆ.
ಬಳಿಕ ಅವರು, ತ್ವರಿತವಾಗಿ ವಿಧಾನಸೌಧದ ಸಭಾಧ್ಯಕ್ಷರ ಕಚೇರಿಗೆ ತಲುಪಬೇಕಾದ ಹಿನ್ನೆಲೆ, ಎಚ್ಎಎಲ್ನಿಂದ ವಿಧಾನಸೌಧದವೆರಗೂ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಜೊತೆಗೆ ರಸ್ತೆಯುದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
Next Story